ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೋದಿ ಜಿ ಪ್ರಮಾಣವಚನ:ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ‌

ಕಲಬುರಗಿ/ಚಿತ್ತಾಪುರ:ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಬಿಜೆಪಿ ಮಂಡಲದ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಿದರು.ಗ್ರಾಮದ ಸೇವಾಲಾಲ್ ಮಹಾರಾಜ ಚೌಕದಿಂದ ಮತ್ತು ಬಾಬು ಜಗಜೀವನ್ ರಾಮ್ ಅವರ ಚೌಕದ ರಸ್ತೆಯ ಮೂಲಕ ಕನಕ ದಾಸ್(ಸಂಗೊಳ್ಳಿ ರಾಯಣ್ಣ ಚೌಕ್ ರಸ್ತೆಯಿಂದ,ಹನುಮಾನ್ ದೇವಸ್ಥಾನದ ಮೂಲಕ ಊರ ಅಗಸಿಯಿಂದ ಗ್ರಾಮ ಪ್ರವೇಶಿಸಿ ಶ್ರೀ ಧ್ಯಾವಮ್ಮ ದೇವಸ್ಥಾನದ ಮುಂದುಗಡೆ ಎಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಬಂದು ಶ್ರೀ ಧ್ಯಾವಮ್ಮ ದೇವಸ್ಥಾನದ ಎದುರುಗಡೆಯಲ್ಲಿ ಪಟಾಕಿ ಸುಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ನರೇಂದ್ರ ಮೋದಿ ಜಿ ಕೀ ಜೈ,ಬಿ.ವೈ ವಿಜಯೇಂದ್ರ ಯಡಿಯೂರಪ್ಪ ನವರಿಗೆ ಜಯಘೋಷಣೆ ಹಾಕುತ್ತಾ ಪಟಾಕಿ ಸಿಡಿಸುತ್ತಾ ಸಿಹಿ ತಿಂಡಿ ತಿನಿಸುಗಳು ಹಂಚುವ ಮೂಲಕ ಸಂಭ್ರಮಿಸಲಾಯಿತು.ಈ ಸಂದರ್ಭಗಳಲ್ಲಿ ಶ್ರೀ ಶರಣಗೌಡ ಪಾಟೀಲ ಬೆನಕನಹಳ್ಳಿ ಸುಗೂರ ಎನ್ ಬಿಜೆಪಿಯ ಹಿರಿಯ ಮುಖಂಡರು ಮತ್ತು ಮಹೇಶ್ ಪಾಟೀಲ ಸುಗೂರ ಎನ್ ಬಿಜೆಪಿಯ ಹಿರಿಯ ಮುಖಂಡರು, ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಬಿಜೆಪಿಯ ಯುವ ನಾಯಕರು ಮತ್ತು ಶರಣಗೌಡ ವಕೀಲರು ಸುಗೂರ ಎನ್.ಬಸ್ಸುಗೌಡ ಮಾಲಿ ಪಾಟೀಲ, ಬಸವರಾಜ ಹಡಪದ ಸುಗೂರ ಎನ್, ಸುಖುದೇವ್ ಚವ್ಹಾಣ, ಹಣಮಂತ ನಾಯ್ಕೊಡಿ, ದೇವೇಂದ್ರ ಸಾಹು ಕುಂಬಾರ, ಯಮನಪ್ಪ ತಳವಾರ, ಸಂಗಣ್ಣ ಸಾಹು ಮಂಡ್ನಳ್ಳಿ, ಸಿದ್ದು ಸಾಹು ಕುಂಬಾರ, ಸಿದ್ದುಗೌಡ ಕುರಾಳ, ರಾಜೇಂದ್ರ ನಾಯ್ಕೊಡಿ , ಈರಪ್ಪ ಗೋಗಿ, ಶಂಕರ ಚವ್ಹಾಣ,ಶಮ್ಮು ನಾಯ್ಕೊಡಿ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಬಿಜೆಪಿಯ ಯುವ ಕಾರ್ಯಕರ್ತರು,ಸಾಬಣ್ಣ ಬೇನಿಗಿಡ್,ಬಾಸುಮೀಯಾ ಬಂಟ್ನಳ್ಳಿ,ಶಿವಕುಮಾರ್ ಹೂಗಾರ ಸೇರಿದಂತೆ ಅನೇಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು,ಅಭಿಮಾನಿಗಳು ಭಾಗವಹಿಸಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ