ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಯಚೂರಿನಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಲು ಅಗ್ರಹಿಸಿ ಎಚ್.ಶಿವರಾಮೇಗೌಡರ ಕ.ರ.ವೇ ಕುಷ್ಟಗಿ ತಾಲೂಕ ಘಟಕದಿಂದ ಮನವಿ ಪತ್ರ ಸಲ್ಲಿಕೆ

ಕೊಪ್ಪಳ/ಕುಷ್ಟಗಿ:”ಕಲ್ಯಾಣ ಕರ್ನಾಟಕದ” ರಾಯಚೂರಿನಲ್ಲಿಯೇ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಮಂಜೂರು ಮಾಡಲು ಒತ್ತಾಯಿಸಿ ಪ್ರತಿಭಟನೆಯ ಮೂಲಕ ಕುಷ್ಟಗಿ ತಾಲ್ಲೂಕು ಘಟಕದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಪ್ರಧಾನಿ ಜಿ ಅವರೇ ತಾವು ಘೋಷಿಸಿದಂತೆ ಈ ದೇಶದಲ್ಲಿ 112 ಮಹತ್ವಕಾಂಕ್ಷಿ ಜಿಲ್ಲೆಗಳಲ್ಲಿ, ಕರ್ನಾಟಕ ರಾಜ್ಯದ ಅದರಲ್ಲೂ ಕಲ್ಯಾಣ ಕರ್ನಾಟಕದ, ರಾಯಚೂರು ಮತ್ತು ಯಾದಗಿರಿ ಜಿಲ್ಲೆ, ಇವೆರಡೇ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಯ ಅಡಿಯಲ್ಲಿ ಬರುತ್ತವೆ. ಕಳೆದ 76 ವರ್ಷಗಳಿಂದ ಅಂದರೆ ಸ್ವಾತಂತ್ರ ಬಂದ ನಂತರ, ಇಂದಿಗೂ ರಾಯಚೂರು ಜಿಲ್ಲೆಗೆ ಯಾವುದೇ ಮಹತ್ವಕಾಂಕ್ಷಿ ಯೋಜನೆ ಜಾರಿಯಾಗಿಲ್ಲ. ರಾಯಚೂರು ಜಿಲ್ಲೆಯು ಬಹಳ ಹಿಂದುಳಿದ ಜಿಲ್ಲೆ ಹಾಗೂ ಹಲವು ರೋಗಗಳ ಜಿಲ್ಲೆ ಅಂದರೂ ತಪ್ಪಾಗಲಿಕ್ಕಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸಲು, ನಂಜುಂಡಪ್ಪ ಆಯೋಗವನ್ನು ರಚಿಸಲಾಯಿತು. ನಂಜುಂಡಪ್ಪನ ವರದಿಯಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಬೇಡಿಕೆಯಂತೆ, ರಾಯಚೂರು ಜಿಲ್ಲೆಗೆ ಐಐಟಿಯನ್ನು ಕೊಡಬೇಕೆಂದು ತಿಳಿಸಲಾಗಿತ್ತು. ಆದರೆ ರಾಯಚೂರಿನಲ್ಲಿ ಐ ಐ ಟಿ ಹೋರಾಟ ಸಮಿತಿಯನ್ನು ಒಳಗೋಂಡೂ ಹಲವು ಸಂಘ ಸಂಸ್ಥೆಗಳು ಕೂಡಾ ಐ ಐ ಟಿ ಯನ್ನು ಪಡೆಯಲು ಬಹಳ ಗಂಭೀರವಾದ ಹೋರಾಟ ಮಾಡಿದರು. ಆದರೆ ಐ ಐ ಟಿ ಮೋಸದಿಂದ, ಧಾರವಾಡದ ಪ್ರಭಲ ರಾಜಕೀಯ ಪ್ರಭಾವದಿಂದ, ಐ ಐ ಟಿ ಯನ್ನು ಧಾರವಾಡಕ್ಕೆ ಕಸಿದುಕೊಳ್ಳಲಾಯಿತು. ಆ ಸಮಯದಲ್ಲಿ ನಮಗೆ ಸಮಾಧಾನಿಸಲು, ರಾಯಚೂರಿಗೆ ಭಾರತೀಯ ವೈದಿಕೀಯ ವಿಜ್ಞಾನಗಳ ಸಂಸ್ಥೆಯನ್ನು (AIIMS) ಆಗಿನ ರಾಜ್ಯ ಸರ್ಕಾರವು, ಭರವಸೆಯನ್ನು ನೀಡಲಾಗಿತ್ತು. ಕರ್ನಾಟಕ ರಾಜ್ಯಕ್ಕೆ ಒಂದು ಭಾರತೀಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (AIIMS) ನೀಡಲಾಗುವುದೆಂದು ತಮ್ಮ ಸರಕಾರ ಘೋಷಣೆ ಮಾಡಿತು. ಆದರೆ ಮತ್ತೆ ಅದೇ ಧಾರವಾಡದ ಪ್ರಭಲ ರಾಜಕಾರಣಿಗಳ ಕುತಂತ್ರ, ಏಮ್ಸ್ ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಹೂನ್ನಾರ ಮಾಡಲಾಗಿದೆ ಈ ವಿಷಯ ತಮ್ಮ ಗಮನಕ್ಕಿರಲಿ. ಅದಲ್ಲದೆ ಸುಮಾರು 26 ತಿಂಗಳಿಂದ (780 ದಿನಗಳಿಂದ) ತಿಂಗಳಿಂದ ಅಂದರೆ ಎರಡು ವರ್ಷಗಳ ಮೇಲ್ಪಟ್ಟು ರಾಯಚೂರಿನಲ್ಲಿ, ರಾಯಚೂರು ಜಿಲ್ಲಾ ಏಮ್ಸ್ (AIIMS) ಹೋರಾಟ ಸಮಿತಿಯಿಂದ ಹಾಗೂ ಹಲವೂ ಸಂಘ ಸಂಸ್ಥೆಗಳ, ವ್ಯಾಪಾರ ಸಂಸ್ಥೆಗಳು, ಜಾತಿ ಸಂಘಗಳ ಬೆಂಬಲದಿಂದ ನಿರಂತರ ಅನಿದಿಷ್ಟ ಧರಣಿ ಸತ್ಯಾಗ್ರ ಮುಂದುವರೆದಿದೆ. ನ್ಯಾಯುತವಾಗಿ ಮಹತ್ವದ ಒಂದು ಆರೋಗ್ಯ ಸಂಸ್ಥೆಯನ್ನು ಪಡೆಯಲು ಎರಡು ವರ್ಷಗಳ ಕಾಲ, 26 ತಿಂಗಳಿಂದ ((780 ದಿನಗಳಿಂದ) ಹೋರಾಟ ಮಾಡಬೇಕಾಗುತ್ತದೆಯೇ ? ಇದು ಪ್ರಧಾನಿಯವರು ಗಂಭೀರವಾಗಿ ಆಲೋಚಿಸಬೇಕಾಗಿದೆ!!!? ರಾಯಚೂರಿಗೆ ಏಮ್ಸ್ ಕೊಡಬೇಕೆಂದು ಇಲ್ಲಿಯ ರಾಜ್ಯ ಸರ್ಕಾರದಿಂದ ಮಂತ್ರಿಗಳು, ಶಾಸಕರುಗಳು ಮತ್ತು ಸಂಸದರು ಹಾಗೂ ಹೋರಾಟಗಾರರ ಒಳಗೊಂಡು, ಕರ್ನಾಟಕ ರಾಜ್ಯ ಸರ್ಕಾರವೂ ಒಂದು ನಿಯೋಗವನ್ನು ತೆಗೆದುಕೊಂಡು ತಮ್ಮ ಸರಕಾರದ ಹಿಂದಿನ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಿಗಳಾದ ಮನಸ್ಸೂಕ ಮಾಂಡವಿಯಾ ರವರಿಗೂ ಭೇಟಿ ಮಾಡಲಾಗಿತ್ತು. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಕೂಡಾ ಎರಡು ಪತ್ರಗಳನ್ನು ತಮ್ಮ ಆರೋಗ್ಯ ಸಚಿವರಿಗೆ ಬರೆದರು. ಕೇಂದ್ರ ಚುನಾವಣಾಯ ಮುಂಚೆ ಬಜೆಟ್ ಘೋಷಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಒಂದು ಪತ್ರವನ್ನ ಹಿಂದಿನ ಮತ್ತು ಈಗಿನ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸಿತಾರಾಮನ ರವರಿಗೂ ಪತ್ರ ಬರೆದರೂ. ಕರ್ನಾಟಕ ರಾಜ್ಯ ಸರಕಾರದ ಇಷ್ಟು ಒತ್ತಡವಿದ್ದರೂ, ತಮ್ಮ ಮತ್ತೂ ತಮ್ಮ ಸರ್ಕಾರದಿಂದ, ಕಡೆಯಿಂದ ನಿರುತ್ತರ ಯಾಕೆ? ಮಹತ್ವಾಕಾಂಕ್ಷಿ ಜಿಲ್ಲೆ ಘೋಷಣೆ ಮಾಡಿದ್ದ ನಂತರ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಳಚೆಗೋಸ್ಕರ ತಾವ್ಯಾಕೆ ರಾಯಚೂರು ಜಿಲ್ಲೆಗೆ ಭಾರತಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೀಡುತ್ತಿಲ್ಲ? ಪ್ರಧಾನಮಂತ್ರಿ ಜಿ ಅವರೇ ಈ ಬಾರಿ ಕಲ್ಯಾಣ ಕರ್ನಾಟಕದ 5 ಸಂಸದರು ಕಾಂಗ್ರೆಸ್ ನಿಂದ ಆಯ್ಕೆ ಆಗಿದ್ದಾರೆ. ಇದಕ್ಕೆ ಕಾರಣ ಏಮ್ಸ್ (AIIMS) ಹೋರಾಟ ದೀರ್ಘದ ಹೋರಾಟ!!!. ಇತಿಹಾಸ ನಿರ್ಮಾಣ ಮಾಡಿದ ಹೋರಾಟ.
ದಯವಿಟ್ಟು ಜನರ ಬೇಡಿಕೆಗಳಿಗೆ ತಾವು ಸ್ಪಂದಿಸಲಿಲ್ಲ ಅಂದ್ರೆ ಹೇಗೆ,?? ತಾವು ವಿಶೇಷವಾಗಿ ಗಮನಹರಿಸಿ, ನಮ್ಮ ರಾಯಚೂರಿಗೆ ತಕ್ಷಣ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ (AIIMS) ಘೋಷಣೆ ಮಾಡಿ ಇಲ್ಲದಿದ್ದರೆ, ಕಲ್ಯಾಣ ಕರ್ನಾಟಕದೆಲ್ಲ ಭಯಂಕರ ಚಳುವಳಿಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಅಪಾರ ಭರವಸೆಯೊಂದಿಗೆ ಈ ಮನವಿ ಪತ್ರವನ್ನು ನಾವು ತಮಗೆ ಸರ್ಕಾರದ ಅಧಿಕಾರಿಗಳಿಂದ ತಲುಪಿಸಿದ್ದೇವೆ ಎಂದು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ