ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಿಮ್ಮಾಪೂರದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬಕ್ಕೆ ತೆರೆ

ಬಾಗಲಕೋಟೆ/ ತಿಮ್ಮಾಪೂರ:ಹಿಂದೂ ಮುಸ್ಲಿಂ, ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ದಿನಾಂಕ:-೧೭-೦೭-೨೦೨೪ ರಂದು ಬುಧವಾರದಂದು ಭಕ್ತಿಭಾವದ ಮಧ್ಯ ತೆರೆಕಂಡಿತು.ಐದು ದಿನಗಳವರೆಗೆ ಪ್ರತಿಷ್ಠಾನಗೊಂಡ ಹಸೇನ ಹುಸೇನರ ಪಾಂಜಾ ಹಾಗೂ ಡೋಲಿಗೆಗಂಧರಾತ್ರಿ ಹಾಗೂ ಕತಲ್‌ರಾತ್ರಿಯ ದಿನ ಹಿಂದೂ ಹಾಗೂ ಮುಸ್ಲಿಂರು ಜಯಘೋಷದೊಂದಿಗೆ ಮಸೀದಿಗೆ ತೆರಳಿ ವೈವಿಧ್ಯ ಪಾನಕ ಹಾಗೂ ನಾನಾ ಹರಕೆಗಳನ್ನು ನೀಡಿ ಲಾಡಿಗಳನ್ನು ಭಕ್ತಿ ಪೂರಕವಾಗಿ ಕೊರಳಲ್ಲಿ ಹಾಕಿಕೊಂಡು ನಮನ ಸಲ್ಲಿಸಿದರು.
ಹಿಂದೂ ಬಾಂಧವರೂ ಕೂಡಾ ಸಕ್ಕರೆ ಊದಬತ್ತಿ ಹಚ್ಚಿ ಭಕ್ತಿಯ ನಮನ ಸಲ್ಲಿಸಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು. ಕತಲ್‌ರಾತ್ರಿ ಅಗ್ನಿ ಕುಂಡಕ್ಕೆ ಹಾಯುವದರೊಂದಿಗೆ ಹೇಳಿಕೆಗಳು ನಡೆದವು. ಮೊಹರಂ ಹಬ್ಬದ ಕೊನೆಯ ದಿನ ಮಸೀದಿಯ ಹಸೇನ್ ಹುಸೇನರ ಡೋಲಿಗಳು ಹಾಗೂ ಪಾಂಜಾಗಳು ಮೆರವಣಿಗೆಗಳ ಮೂಲಕ ಹೊಳಿಗೆ ಕಳುಹಿಸಲಾಯಿತು. ಸಂಜೆ ಮಸೀದಿಯ ಮುಂಭಾಗದಲ್ಲಿ ವಿಲಿನಗೊಂಡ ಪಾಂಜಾಗಾಗೂ ಡೋಲಿಗಳ ಮೆರವಣಿಗೆಗೆ ಗ್ರಾಮದ ಯುವಕರ ಹೆಜ್ಜೆಕುಣಿತ ಹಾಗೂ ಹಲಗೆ ಮೇಳದ ಯುವಕರ ತಂಡಗಳು ಮೊಹರಂ ಹಬ್ಬಕ್ಕೆ ಕಳೆಕಟ್ಟಿದವು. ನಂತರ ರಾತ್ರಿ ಊರ ಮುಂದಿನ ಬಾವಿಗೆ ತೆರಳಿ ಮೆರವಣಿಗೆಯ ಮೂಲಕ ಸಾಗಿ ಪೂಜೆ ಮುಗಿಸಿ ಮುಸ್ಲಿಂ ಹಿರಿಯರು ಮರಳಿ ಮಸೀದಿಗೆ ಬರುವಾಗ ಹಸೇನ ಹುಸೇನ್‌ರು ಪ್ರಾಣತೆತ್ತ ಸಂಕೇತವಾಗಿ ಶೋಕ ಗೀತೆಗಳನ್ನು ಹಾಡಿದರು. ಮೊಹರಂ ಹಬ್ಬಕ್ಕೆ ಹುಲಿ ವೇಷ, ಹಳ್ಳೋಳ್ಳಿ ಬವ್ವ, ವೇಷಧಾರಿಗಳು ಮೆರಗು ನೀಡಿದವು ಮೆರವಣಿಗೆ ಉದ್ದಕ್ಕೂ ಹಲಗೆಯ ನಾದಕ್ಕೆ ಯುವಕರು ಯುವಕರು ಕುಣಿದು ಕುಪ್ಪಳಿಸಿ ಹರ್ಷಪಟ್ಟರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ