ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪತ್ನಿಗೆ ಕಿರುಕುಳ ಆರೋಪ:ಪೊಲೀಸ್ ಕಾನಸ್ಟೇಬಲ ರೇವಣಸಿದ್ದ ಕೆಂಚಗೊಂಡ ವಿರುದ್ಧ ಪತ್ನಿ ದೂರು

ಕಲಬುರಗಿ:ತಮ್ಮನಿಗೆ ಕಿಡ್ನಿ ಹಾಗೂ ತನಗೆ ಬಂಗಾರ, ಹಣ ನೀಡಬೇಕು ಎಂದು ಪತ್ನಿಗೆ ಕಿರುಕುಳ ನೀಡಿದ ಪೊಲೀಸ್ ಕಾನಸ್ಟೇಬಲ್ ರೇವಣಸಿದ್ಧ ಕೆಂಚಗೊಂಡ  ವಿರುದ್ಧ ಆತನ ಪತ್ನಿಯಾದ ಜಗದೇವಿ (22)ಅವ್ರು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದಿನಾಂಕ 30/7/2024ರಂದು ಪ್ರಕರಣ ದಾಖಲಿಸಿದ್ದಾರೆ . ಜಗದೇವಿ ವಿಜಯಪುರ ಜಿಲ್ಲೆಯ ಬಂಕಲಗಿಯ ಪೊಲೀಸ್ ಕಾನ್ ಸ್ಟೇಬಲ ರೇವಣಸಿದ್ದಪ್ಪ ಕೆಂಚಗೊಂಡ ಕಲ್ಕೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮದುವೆಯಲ್ಲಿ 10 ತೊಲೆ ಬಂಗಾರ ಎರಡು ಲಕ್ಷ ರೂಪಾಯಿ ಹಣ ಸಾಮಗ್ರಿಗಳು ಸೇರಿದಂತೆ ಒಟ್ಟು 15 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡಲಾಗಿದೆ ಇಷ್ಟು ಹಣ ಕೊಟ್ಟರೂ ಕಾನ್ ಸ್ಟೇಬಲ್ ಪತಿರಾಯ ರೇವಣಸಿದ್ಧ ಕೆಂಚಗೊಂಡ ಇನ್ನಷ್ಟು ಹಣ ತರುವಂತೆ ಪೀಡಿಸುತ್ತಿದ್ದು ಅದೇ ರೀತಿಯಾಗಿ ತನ್ನ ತಮ್ಮನಿಗೆ ಕಿಡ್ನಿ ಫೇಲಾಗಿದ್ದು ತಮ್ಮನಿಗೆ ಕಿಡ್ನಿ ನೀಡುವಂತೆ ಕಿರುಕುಳ ನೀಡುತ್ತಿದ್ದು ಹಾಗೂ ಎರಡನೇ ಮಗುಕೂಡಾ ಹೆಣ್ಣು  ಹುಟ್ಟುತ್ತೆ ಅದನ್ನು ತೆಗೆಯುವಂತೆ ವಿವಿಧ ರೀತಿಯ ಮಾನಸಿಕ ಕಿರುಕುಳ ನೀಡುತ್ತಿದ್ದು ಅಷ್ಟೇ ಅಲ್ಲದೆ ಹಣ ಬಂಗಾರ ಇನ್ನು ಕೊಡಬೇಕು ಎಂದು ಚಿತ್ರಹಿಂಸೆ ನೀಡಿ ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಅಷ್ಟೇ ಅಲ್ಲದೆ ತನ್ನ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿದ ತನ್ನ ಪತಿಗೆ ಕಠಿಣ ಶಿಕ್ಷೆ  ನೀಡಬೇಕು ಎಂದು ಪತ್ನಿಯಾದ ಜಗದೇವಿ ಅವರು ದೂರು ನೀಡಿದ್ದಾರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಠಾಣಾಧಿಕಾರಿ ವಿಶ್ವನಾಥ ಮುದರೆಡ್ಡಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ