ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿದ್ಯುತ್ ಅವಘಡ ಇಬ್ಬರ ದುರಂತ ಸಾವು…?

ತುಮಕೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರು ಯುವಕರು ದುರಂತ ಸಾವೀಗೀಡಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಪಾವಗಡ ತಾಲ್ಲೂಕಿನ ಟಿ.ಎನ್.ಬೆಟ್ಟದ ಹೊರವಲಯದ ಸರ್ವೇ ನಂಬರ್ 293 ರ ಜಮೀನಿನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಇದಾಗಿದೆ.
29 ವರ್ಷದ ಅನಿಲ್ ಕುಮಾರ್
ತಂದೆ ಹನುಮಂತರಾಯಪ್ಪ ಮತ್ತು ಸುಮಾರು 35 ವರ್ಷದ ಪುಟ್ಟರಾಜು, ತಂದೆ ರಾಮರಾಜಪ್ಪ ಅವಘಡಕ್ಕೆ ತುತ್ತಾಗಿ ಉಸಿರು ಚೆಲ್ಲಿರುವ ದುರ್ವೈವಿಗಳಾಗಿದ್ದಾರೆ.
ಇವರು ಬೋವಿ ಸಮಾಜಕ್ಕೆ ಸೇರಿದ ಒಂದೇ ಕುಟುಂಬದವರಾಗಿದ್ದು. ರೈತಾಪಿವರ್ಗದವರಾಗಿದ್ದಾರೆ.
ಸುಮಾರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಭಿತ್ತನೆ ಮಾಡಿದ್ದ ರಾಮರಾಜಪ್ಪನ ಕುಟುಂಬಸ್ಥರು ಕಾಡು ಪ್ರಾಣಿಗಳ ಕಾವಲಿಗೆ ಎಂದು ಪ್ರತಿದಿನ ರಾತ್ರಿ ಹೊಲಕ್ಕೆ ಬರುತ್ತಿದ್ದರು. ನೀರು ಹಾಯಿಸುತ್ತಿದ್ದರು.. ಎಂದಿನಂತೆ ಶುಕ್ರವಾರ ರಾತ್ರಿಯೂ ಈ ನತದೃಷ್ಟ ಪುಟ್ಟರಾಜು ವಿನೊಂದಿಗೆ ಪಾಪ ಅನಿಲ್ ಕುಮಾರ್ ನಿಗೆ ಒಂದು ಕೈ ಇರಲಿಲ್ಲ…ಇತನು ಬಂದಿದ್ದಾನೆ…ರಾತ್ರಿ ವಿಪರೀತ ಮಳೆ ಕೂಡ ಇತ್ತು… ಕಾಡುಪ್ರಾಣಿಗಳ ರಕ್ಷಣೆಗೆಂದು ತಂತಿಬೇಲಿ ಹಾಕಿದ್ದರು ಆದರೆ ವಿದ್ಯುತ್ ಸಂಪರ್ಕ ಕೊಟ್ಟಿರಲಿಲ್ಲ ..ಆದರೂ ಈ ಹುಡುಗರು ನಮಗೆ ಗೊತ್ತಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರೇನೋ ಗೊತ್ತಿಲ್ಲ…ಎಂದು ಅವಘಡಕ್ಕೆ ತುತ್ತಾದವರ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು…
ಅನಿಲ್ ಕುಮಾರ್ ತಾಯಿ ಅಲವತ್ತುಕೊಂಡಿದ್ದು ಹೀಗೆ…

ಮಾಹಿತಿ ತಿಳಿದ ಕೂಡಲೇ ಪಾವಗಡ ಅರಸೀಕೆರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತ ದೇಹ ಸಾಗಿಸುವ ತಯಾರಿ ನಡೆಸಿದ್ದಾರೆ.
ಇನ್ನು ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಸಿಬ್ಬಂಧಿಗಳು ಧಾವಿಸಿ ಅನಾಹುತದ ಮಾಹಿತಿ ಪಡೆದಿದ್ದಾರೆ… ನಿಜಕ್ಕೂ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಅನಿಲ…ವಿವಾಹವಾಗಿ ಬದುಕು ಕಟ್ಟಿಕೊಳ್ಳಬೇಕಾಗಿತ್ತು …
ಮದುವೆಯಾಗಿದ್ದ ಇನ್ನೋರ್ವ ಬದುಕಿನ ವಿಧಿಯಾಟ ಈಗೆ ನಿಂತಿದ್ದು ಮಾತ್ರ ಕಣ್ಣಲ್ಲಿ ಕಣ್ಣೀರು ತರಿಸುತ್ತದೆ…

ರೈತರೇ ಹೊಲಗಳಲ್ಲಿ ವಿದ್ಯುತ್ ಸಂಪರ್ಕದ ಕಡೆ ಗಮನವಿರಲಿ,ಅದರಲ್ಲೂ ಮಳೆಗಾಲದಂತೂ ಎಷ್ಟೇ ಎಚ್ವರವಾಗಿದ್ದರೂ ಕಡಿಮೆನೇ ಸದಾ ಜಾಗೃತರಾಗಬೇಕಿದೆ.. ಮೃತ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸವಾಗ ಬೇಕಿದೆ…ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಿ ನೊಂದವರಿಗೆ ಸಾಂತ್ವಾನ ತಿಳಿಸಬೇಕಿದೆ.

ವರದಿ: ಕೆ.ಮಾರುತಿ ಮುರಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ