ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಮೈಸೂರು ಜಿಲ್ಲೆಯ ನಂಜನಗೂಡಿನ ದೇವೀರಮ್ಮನಹಳ್ಳಿಯ ಪಾಳ್ಯದ ವಿಶ್ವಗುರು ಲೇ ಔಟ್ ನ ಪರಮೇಶ್ ರವರ ಮಹಾಮನೆಯಲ್ಲಿ ನಂಜನಗೂಡು ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಭಾರತ ಪ್ರತಿಷ್ಠಾನದ ಮೂಲಕ ಬಸವಾದಿ ಶರಣರ ವಚಗಳಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು. ಅನುಭಾವ ನೀಡಿದ ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ಬಹಳಷ್ಟು ಕಲಹಗಳು ನಡೆಯುತ್ತಿವೆ ಕಾರಣ ನಾವು ನುಡಿಯುವ ಮಾತಿನಿಂದ ನಾವಾಡುವ ನುಡಿ ದ್ವೇಷ ಅಸೂಯೆಯಿಂದ ಕೂಡಿರಬಾರದು ಭಕ್ತಿ ಮತ್ತು ಪ್ರೀತಿಯಿಂದ ಕೂಡಿರಬೇಕು ಬಸವಣ್ಣನವರು ವಚನದಂತೆ ನುಡಿದರೆ ಮುತ್ತಿನಹಾರದಂತಿರಬೇಕು ಸ್ಪಟಿಕದ ಸಲಾಕೆಯಂತಿರಬೇಕು ಲಿಂಗ ಮೆಚ್ಚಿ ಅಹುದೆನ್ನಬೇಕು. ನಾನೆಂಬ ಅಹಂಕಾರವನ್ನು ಬಿಟ್ಟಾಗ ಮಾತ್ರ ವ್ಯಕ್ತಿತ್ವ ವಿಕಾಸವಾಗುತ್ತದೆ ಇಲ್ಲಂದರೆ ವಿನಾಶವಾಗುತ್ತದೆ.ಸಜ್ಜನರ ಸಂಗದಿಂದ ವಿಕಾಸ ದುರ್ಜನರ ಸಂಗದಿದ ವಿನಾಶ.ಮೂಢನಂಬಿಕೆ ನಮ್ಮನ್ನು ಅಜ್ಞಾನ ಅಂಧಕಾರ ಕಡೆ ನೂಕುತ್ತವೆ
ವಚನಗಳು ನಮಗೆ ಸುಜ್ಞಾನ ನೀಡುತ್ತವೆ ಎಂದು ಹೇಳಿದರು.ಮನಸ್ಸಿನ ಹರಿಯಲು ಬಿಡಬಾರದು ಲಿಂಗ ಧ್ಯಾನದಲ್ಲಿ ನಿರೀಕ್ಷಣೆಯಲ್ಲಿರಿಸಬೇಕು.
ಕುಡಿತ ಜೂಜು ಮಾದಕವಸ್ತುಗಳಿಂದ ದೂರವಿರಬೇಕು ಮಾನವ ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ,ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ ಬಂದು ಬಸವಾದಿ ಶರಣರ ಸತ್ ಚಿಂತನೆಗಳನ್ನು ಅಳವಡಿಸಿ ಕೊಂಡು ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳೋಣ
ಎಂದು ಹೇಳಿದರು.ವೇದಿಕೆಯಲ್ಲಿ ನಂಜನಗೂಡು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ದೇವಿರಮ್ಮನಹಳ್ಳಿ ನಂದೀಶ್ ಬಸವ ಭಾರತ ಪ್ರತಿಷ್ಠಾನದ ಅಧ್ಯಕ್ಷ ನಂದೀಶ್ ಮುಖಂಡರಾದ ಮಹೇಶ್ ಬಸವರಾಜು ಮಾಧುಸ್ವಾಮಿ ವಚನ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.ಅಕ್ಕ ಮಹಾದೇವಿ ವಿದ್ಯಾರ್ಥಿನಿಲಯದ ಮಕ್ಕಳು ವಚನಗಾಯನ ಮಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ