ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಆರದಿರಲಿ ಕನ್ನಡದ ದೀಪ “

ಆರದಿರಲಿ ಕನ್ನಡದ ದೀಪ
ಎಂದೋ ಹಚ್ಚಿದ ಈ ದೀಪ
ಎರೆಯಬೇಕು ಭಾವ ತೈಲ
ಬೆಳಗಬೇಕು ಕನ್ನಡದ ದೀಪ/

ಊದಬೇಕು ಕನ್ನಡದ ಕಹಳೆ
ಬಾರಿಸಬೇಕು ಜಾಗೃತ ಘಂಟೆ
ಸುರಿಯಬೇಕು ಅಕ್ಷರದ ಮಳೆ
ಸುಲಿಯಬೇಕು ಹೆಡ್ಡರ ತೊಗಟೆ//

ಬೆಳೆಯದಿರಲಿ ಆಂಗ್ಲರ ಜಾಲಿ
ಬೆಳೆಯಬೇಕು ಕನ್ನಡ ಫಸಲು
ಕೀಳಬೇಕು ವ್ಯಾಮೋಹ ಬೇಲಿ
ನುಡಿಸಬೇಕು ಕನ್ನಡ ಕೊಳಲು

ಪಸರಿಸಲಿ ಕನ್ನಡದ ಜ್ವಾಲೆ
ಜಗದ ತುಂಬಾ ಮುಗಿಲಗಲ
ಆರದಿರಲಿ ಹೊತ್ತಿದ ಜ್ಯೋತಿ
ಮಿನುಗಲಿ ಕರುನಾಡ ದೇಗುಲ

ಭಾರತಾಂಬೆಯತನುಜಳಿವಳು
ನನ್ನ ತಾಯಿ ಕರುನಾಡ ಮಾತೆ
ಬಾಳಲಿ ನೂರು ವರ್ಷ ಇವಳು
ಸವಿಜೇನಾಗಲಿ ಕನ್ನಡs ಮತ್ತೆ/

ಕವಿ: ಹನುಮಂತರಾವ್ ನಾಗಪ್ಪಗೋಳ ಸಾಹಿತಿಗಳು, ಗೋಕಾಕ ಬೆಳಗಾವಿ- ಜಿಲ್ಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ