ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಂಗಾರ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ, 2,65,000/-ರೂ ಬೆಲೆ ಬಾಳುವ ಬಂಗಾರದ ಅಭರಣಗಳನ್ನು ಜಪ್ತಿ

ಕೊಟ್ಟೂರು : ಶ್ರೀ ಹರಿಬಾಬು ಐ ಪಿ ಎಸ್ ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಮತ್ತು ಶ್ರೀ ಸಲೀಂ ಭಾಷಾ ಎ. ಎಸ್. ಪಿ.ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲೇಶಪ್ಪ ಮಲ್ಲಾಪುರ ,ಡಿ ವೈ ಎಸ್ ಪಿ ಕೂಡ್ಲಿಗಿ ಉಪವಿಭಾಗ ರವರ ಮುಂದಾಳತ್ವದಲ್ಲಿ ಹಾಗೂ ಶ್ರೀ ವೆಂಕಟಸ್ವಾಮಿ ಸಿ ಪಿ ಐ ಕೊಟ್ಟೂರು ಮತ್ತು ವಿಕಾಸ್ ಲಮಾಣಿ ಸಿ, ಪಿ, ಐ, ಹಗರಿಬೋಮ್ಮನಹಳ್ಳಿ ರವರುಗಳ ನೇತ್ರತ್ವದಲ್ಲಿ
ಕೊಟ್ಟೂರು ಪೋಲಿಸ್ ಠಾಣೆಯ ಪಿ,ಎಸ್,ಐ ಗೀತಾಂಜಲಿ ಶಿಂಧೆ ಮತ್ತು ಸಿಬ್ಬಂದಿಯಾದ ವೀರೇಶಿ, ಬಸವರಾಜ, ಶಶಿಧರ ವೈ , ರೇವಣಸಿಧ್ದಪ್ಪ, ಮತ್ತು ಕೂಡ್ಲಿಗಿಯ ಡಿ ಎಸ್ ಪಿ ಕಛೇರಿಯ ಸಿಬ್ಬಂದಿಯಾದ ಸಿ,ಕೊಟ್ರೇಶಿ , ಹಗರಿಬೋಮ್ಮನಹಳ್ಳಿಯ ಪೋಲೀಸ್ ಠಾಣೆಯ ಸಿಬ್ಬಂದಿಯವರಾದ ಚಿದಾನಂದ ಇವರಗಳ ಒಂದು ತಂಡವನ್ನು ರಚನೆ ಮಾಡಿದ್ದು ಖಚಿತ ಮಾಹಿತಿ ಮೇರೆಗೆ ದಿನಾಂಕ 07-9-2024 ರಂದು ಬೆಳಿಗ್ಗೆ 7-30 ಗಂಟೆಗೆ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿಯವರ ತಂಡ ಅರೋಪಿತನಾದ ಹೆಚ್ ಹನುಮಂತ ತಂದೆ ಕೊಲ್ಲಪ್ಪ 26 ವರ್ಷ ,ಭೋವಿ ಜನಾಂಗ ಗಾರೆ ಕೆಲಸ ವಾಸ ಭೈರಾದೇವರ ಗುಡ್ಡ ಗ್ರಾಮ ಕೊಟ್ಟೂರು ತಾಲೂಕು ಹಾಲಿವಾಸ ಕರಿಮಾರಮ್ಮ ದೇವಸ್ತಾನದ ಹತ್ತಿರ ಕರಿ ಮಾರಮ್ಮ ಕಾಲೋನಿ ಬಳ್ಳಾರಿ ನಗರ ಈತನನ್ನು ಪೋಲಿಸ್ ಸಿಬ್ಬಂದಿ ವಶಪಡಿಸಿಕೊಂಡು ಈ ಅರೋಪಿಯಿಂದ

1) ಬಂಗಾರದ ಒಂದು ನೆಕ್ ಚೈನ್ ಮತ್ತು ಒಂದು ಇನಿಷಿಯಲ್ ಉಂಗರ
2)ಬಂಗಾರದ ಒಂದು ಜೊತೆ ಹ್ಯಾಂಗಿಂಗ್ಸ್ ಮತ್ತು ಒಂದು ಕೊರಳು ಚೈನ್
3) ಬಂಗಾರದ ಮೂರು ಜೊತೆ ಜುಮಿಕಿ ಬೆಂಡೋಲೆಗಳು
4) ಬಂಗಾರದ ಎಂಟು ಸಣ್ಣ ಉಂಗುರುಗಳನ್ನು .
ಎಲ್ಲಾ ಒಟ್ಟು 2,65,000/ರೂ ಬೆಲೆ ಬಾಳುವ ಬಂಗಾರದ ಅಭರಣಗಳನ್ನು ಜಪ್ತು ಪಡಿಸಿಕೊಂಡು .
ಅರೋಪಿತನು ಈ ಪ್ರಕರಣಗಳಲ್ಲಿ ಅಲ್ಲದೇ ಹೆಚ್ ಬಿ ಹಳ್ಳಿ ಪೋಲಿಸ್ ಠಾಣೆಯ ಸರಹದ್ದಿನಲ್ಲಿ ಮತ್ತು ತುಮಕೂರು ನಗರ ಪೋಲಿಸ್ ಠಾಣೆಯ ಸರ ಹದ್ದಿನಲ್ಲಿ ಸಹ ಕಳ್ಳತನ ಮಾಡಿರುವುದಾಗಿ ಅರೋಪಿಯು ಒಪ್ಪಿಗೆ ಕೊಂಡಿರುತ್ತಾನೆ ಎಂದು ಪೋಲೀಸ್ ಸಿಬ್ಬಂದಿ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ

ತಂಡದ ಕಾರ್ಯಚರಣೆ ಯಶಸ್ವಿಯನ್ನು ಗಮನಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು ಕೊಟ್ಟೂರು ಪೊಲೀಸ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ