ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನ:ಮರೆತು ಬಿಡು ಜಾತಿ

ಬದುಕ ಬಂಡಿಯ ನೂಕುತ್ತ
ಸಾಗಿರುವ ನಾವು,
ಉಂಡಿರುವೆವು ಸಹಸ್ರಾರು
ನೋವು-ನಲಿವು.
ಕಷ್ಟಗಳು ನಮಗೇನು
ಹೊಸದಲ್ಲ, ಗೆಳೆಯ,
ಅವುಗಳನೇ ಹಾಸಿ,ಹೊದ್ದವರು
ನೋವಿನಲ್ಲಿ, ಮಿಂದೆದ್ದವರು, ನೋವೇ ಬರಲಿ,ನಗುವೇ ಇರಲಿ
ಎರಡನ್ನೂ ಸಮನಾಗಿ ಕಂಡವರು ನಾವು,
ಬದುಕಿರುವ ತನಕ
ಅನುಭವಿಸಲೇ ಬೇಕಲ್ಲ,
ಬೇಂದ್ರೆ ಹೇಳಿಲ್ಲವೇ,
“ಬಡ ನೂರು ವರುಷಾನ,
ಹರುಷಾದಿ ಕಳೆಯೋಣ”
ಜೀವನದಿ ನೋಯಬೇಕು,
ಬೇಯಬೇಕು,ಆಗಲೇ
ಸಾರ್ಥಕ ಬದುಕು.
ನೊಂದವನೆಂದು,ನೀ
ಕಳೆಗುಂದಬೇಡ, ಸಮಾಧಾನಕ್ಕಿಂತ ದೊಡ್ಡ
ಬಹುಮಾನ ಬೇರೊಂದಿಲ್ಲ,
ಇರಲಿ ನಿನ್ನಲಿ ಸಹನೆ, ಪ್ರೀತಿ,
ಮರೆತು ಬಿಡು ಎಲ್ಲಾ ಜಾತಿ.

-ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ