ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿವಮೊಗ್ಗದ ಗುಂಡಪ್ಪ ಶೆಡ್ ನಿವಾಸಿಗಳ ಸಂಘದ ಗಣೇಶೋತ್ಸವ

ಶಿವಮೊಗ್ಗ : ತಮ್ಮ ಹನ್ನೆರಡನೇ ವರ್ಷದ ಗಣೇಶ ಉತ್ಸವವನ್ನು ಗುಂಡಪ್ಪಶೆಡ್ ಮಲ್ಲೇಶ್ವರ ನಗರ ಮತ್ತು ರಾಮರಾವ್ ಬಡಾವಣೆ ನಿವಾಸಿಗಳ ಸಂಘ ಜಂಟಿಯಾಗಿ ಬಹು ಅದ್ದೂರಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ನಗರಕ್ಕೆ ಶೋಭೆ ತಂದಿದೆ.ನಿನ್ನೆಯ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶ್ರೀ ಎಚ್ ಸಿ ಯೋಗೀಶ್ ಅವರು ಆಗಮಿಸಿ ಕಾರ್ಯಕ್ರಮದ ಕಲಾವಿದರನ್ನು ಸನ್ಮಾನಿಸಿದರು.

ದಿನಾಂಕ 07.09.2024 ರಿಂದ 11.09.2024ರ ತನಕ ಶಿವಮೊಗ್ಗದ ಗುಂಡಪ್ಪಶೆಡ್ ಮುಸ್ಸಂಜೆ ಉದ್ಯಾನವನದಲ್ಲಿ ಗಣೇಶೋತ್ಸವ ಜರುಗುತ್ತಿದ್ದು ಈ ವರ್ಷ ಪರೋಪಕಾರಂ ತಂಡದಿಂದ ಮನೋರಂಜನೆ, ರೇಣುಕಪ್ಪ ತಂಡದಿಂದ ಕೃಷ್ಣ ಸಂಧಾನ ನಾಟಕ ಕಾರ್ಯಕ್ರಮಗಳು ಭಕ್ತಾದಿಗಳ ಮನಸ್ಸಿಗೆ ಮುದ ನೀಡಿದವು.

ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಶ್ರೀ ಎಚ್ ಸಿ ಯೋಗೇಶ್ ಅವರು ಶುಭಾಸಂಚನೆ ನಡೆಸಿದರು.

ಇಂಡಿಯನ್ ದಿವ್ಯಾoಗ ಎಂಪವರರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರುನಾಡ ಕಂದ ಪತ್ರಿಕೆಯ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಶ್ರೀ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿದರು.

ದಿನಾಂಕ 10.09.2024ರ ಮಂಗಳವಾರ ಸಂಜೆ ಸಹಚೇತನ ನಾಟ್ಯಾಲಯದಿಂದ ಭರತನಾಟ್ಯ ಕಾರ್ಯಕ್ರಮವಿದ್ದು ದಿನಾಂಕ 11.09.2024ರ ಬುಧವಾರ ಸಂಜೆ 4ಗಂಟೆಗೆ ಮಹಾ ಮಂಗಳಾರತಿ ಹಾಗೂ ರಾಜಬೀದಿ ಉತ್ಸವದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುವುದು.

ನಿವಾಸಿಗಳ ಸಂಘದ ಗೌರವಧ್ಯಕ್ಷ ಶ್ರೀ ಅಚ್ಯುತ ರಾವ್, ಅಧ್ಯಕ್ಷ ಶ್ರೀ ಪ್ರಕಾಶ್ ಜೋಡಿಯಾಕ್, ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದಪ್ಪ ಹಾಗೂ ಖಜಾಂಚಿ ಶ್ರೀ ಮೋಹನಕುಮಾರ್ ಇವರುಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದಾರೆ.

ವರದಿ : ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ