ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶೇಕ್ ತಾಜುದ್ದೀನ್ ಅವರನ್ನು ಕಲಬುರಗಿ ಯುವ ಅಧ್ಯಕ್ಷರನ್ನಾಗಿ ಘೋಷಣೆ

ಕಲಬುರಗಿ ಯಶಸ್ವಿಯಾಗಿ “ವೆಲ್ಫೇರ್ ಯುವ ಕರ್ನಾಟಕ” ಉದ್ಘಾಟನೆ

ದಿನಾಂಕ 08/09/2024ರಂದು ಕಲಬುರಗಿ ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಯುವ ಸಂಘಟನೆ

ಶೇಖ್ ತಾಜುದ್ದೀನ್ ಅವರು ಕಲಬುರಗಿ ಯುವ ಅಧ್ಯಕ್ಷರು ಎಂದು ಘೋಷಿಸಿದರು.

“ವೆಲ್ಫೇರ್ ಯುವ ಕರ್ನಾಟಕ” ಇದರ ಉದ್ಘಾಟನೆ ಸಂಭ್ರಮದಿಂದ ನೆರವೇರಿದ್ದು, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಯುವಕರು ಪಾಲ್ಗೊಂಡಿದ್ದರು.

ಸಮ್ಮೇಳನ ಸಭಾಂಗಣಕ್ಕೆ ಜಾಥಾವನ್ನು ಸಂಘಟಿಸಲಾಗಿತ್ತು, ಯುವಕರು ಅತೀ ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತಾ ಸಭಾಂಗಣಕ್ಕೆ ತಲುಪಿದರು, ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೆರ್ ಹುಸೇನ್ ರವರು ಸಮಾವೇಶವನ್ನು ಉದ್ಘಾಟಿಸಿದರು, ನಂತರ ಧ್ವಜವನ್ನು ವೆಲ್ಫೇರ್ ಯುವ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮುಹಮ್ಮದ್ ರಫೀಕ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಮಾವೇಶದಲ್ಲಿ ಶೇಖ ತಾಜುದ್ದೀನ್ ಅವರಿಗೆ ಜಿಲ್ಲಾ ಯುವ ಅಧ್ಯಕ್ಷರು ಮಾಡಲಗಿದ್ ಇಂದು ರಾಜ್ಯ ಅಧ್ಯಕ್ಷರು ತೆಲಸಿದಾರ್ ಹಾಗೂ ಉತ್ತರ ಕರ್ನಾಟಕದ ನೂರಾರು ಯುವಕರು ಭಾಗವಹಿಸಿದ್ದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಷಾ ಖುರೇಶಿ ಉದ್ಘಾಟನ ಭಾಷಣ ಮಾಡಿದರು.
ಈ ವೇಳೆ ಕಲಬುರಗಿ ನಗರದ ಇಬ್ಬರು ಸಾಧಕರಿಗೆ ವೆಲ್ಫೇರ್ ಯುವ ಪ್ರಶಸ್ತಿ ನೀಡಲಾಯಿತು.
ವೆಲ್ಪೇರ್ ಯುವ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್, ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಅಹಮದ್, ತಲತ್ ಯಾಸ್ಮೀನ್, ಮುಬೀನ್ ಅಹ್ಮದ್, ಆಸಿಫ್ ಬಿಳಿಕುದ್ರಿ, ಸಿ.ಎಚ್.ಸಲಾಮ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಹಬೀಬುಲ್ಲಾ ಖಾನ್ ಅವರ ಸಮಾರೋಪ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪಕ್ಷದ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಅಫ್ಝಲ್ ಹುಸೇನ್ ಹುಮನಾಬಾದ ಕಾರ್ಯಕ್ರಮ ನಿರೂಪಿಸಿದರು.

ವರದಿ ಮೊಹಮ್ಮದ್ ಅಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ