ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪೋಲಿಸ್ ವಸತಿ ಗೃಹದಲ್ಲಿ ಮರಗಳ ಮಾರಣ ಹೋಮ ಮಾಡಲು ಮುಂದಾದ ಅರಣ್ಯ ಅಧಿಕಾರಿಗಳು: ಅಮರೇಗೌಡ ಮಲ್ಲಾಪೂರ ಆಕ್ರೋಶ

ಸಿಂಧನೂರಿನ ಪೋಲಿಸ್ ಇಲಾಖೆಯ ವಸತಿ ಗೃಹಗಳ ಆವರಣದಲ್ಲಿ ನಗರೀಕರಣಕ್ಕಾಗಿ ಕಟ್ಟಡಗಳನ್ನು ನಿರ್ಮಿಸಲು ಸುಮಾರು25 ರಿಂದ30 ವರ್ಷಗಳ ಸುಮಾರು 14 ಮರಗಳ ಮಾರಣ ಹೋಮ ಮಾಡಲು(ಕಡಿದು ಹಾಕಲು)ಗುತ್ತಿಗೆದಾರರ ಜೊತೆಗೂಡಿ ಅರಣ್ಯ ಅಧಿಕಾರಿಗಳು ಬೃಹತ್ತಾಗಿ ಬೆಳೆದ ಮರಗಳಿಗೆ ಅಂಕಿ ಸಂಖ್ಯೆಗಳನ್ನು ಹಾಕಿರುವುದುನ್ನು ಕಂಡು ಈ ಮರಗಳನ್ನು ಕಡಿಯಲು ಮುಂದಾದರೆ ಅಪ್ಪಿಕೋ ಚಳುವಳಿ ಹಮಿಕೊಳ್ಳಲಾಗುವುದು ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಅವರು ನಗರೀಕರಣದಿಂದಾಗಿ ಇತ್ತೀಚೆಗೆ ಬೃಹತ್ತಾಗಿ ಬೆಳೆದ ಮರಗಳನ್ನು ಕಡಿಯುತ್ತಿರುವುದು ಒಂದು ದುರದೃಷ್ಟಕರ ಸಂಗತಿಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಬೃಹತ್ತಾಗಿ ಬೆಳೆದ ಮರಗಳನ್ನು ಕಡಿಯಲು ಅನುಮತಿ ನೀಡುತ್ತಿರುವುದು ವಿಪರ್ಯಾಸವೇ ಸರಿ ಮರಗಳನ್ನು ಕಡಿಯುವ ಯಾವುದೇ ಅಧಿಕಾರಿಗಳಾಗಿರಲಿ ಗುತ್ತಿಗೆದಾರರಾಗಿರಲಿ 1 ಮರಕ್ಕೆ 21 ಗಿಡಗಳನ್ನು ನೆಟ್ಟು 3 ವರ್ಷಗಳವರೆಗೆ ಪಾಲನೆ ಪೋಷಣೆ ಮಾಡುವಂತೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟರೆ ಮಾತ್ರ ಅನುಮತಿ ನೀಡಬೇಕು ಇಲ್ಲದಿದ್ದರೆ ಮರಗಳ ಮಾರಣ ಹೋಮ ಮಾಡುವಾಗ ಅರಣ್ಯ ಅಧಿಕಾರಿಗಳು ವಿರುದ್ಧವಾಗಿ ಎಲ್ಲಾ ಪರಿಸರ ಪ್ರೇಮಿಗಳು ಸೇರಿ ಮರಗಳನ್ನ ಅಪ್ಪಿಕೊಂಡು ಅಪ್ಪಿಕೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ