ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಛಾಯಾಗ್ರಾಹಕ ಬಂಡ್ರಿ ಗಂಗಾಧರ ರವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

ವಿಜಯನಗರ/ಕೊಟ್ಟೂರು:
ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘದ ಡಿ ಜೆ ಪ್ರೋ ಇಮೇಜ್ ಎಕ್ಸಿಮಿಷನ್ ನ ಕಾರ್ಯಕ್ರಮವನ್ನು ವೈಟ್ ಫೀಲ್ಡ್ ತ್ರಿಪುರಾವಾಸಣಿ ಬೆಂಗಳೂರು ನಗರದಲ್ಲಿ 10 ನೇ ವರ್ಷದ ದಶಮಾನೋತ್ಸವ ಡಿ ಜೆ ಇಮೇಜ್ 21/ 9/2024 ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷರಾದ ಕೆ ಸಿ ನಾಗೇಶ್ ಇವರಿಂದ ಕೊಟ್ಟೂರು ತಾಲೂಕು ಮಟ್ಟದ ಛಾಯಾಗ್ರಾಹಕ ಪ್ರಶಸ್ತಿಗೆ ಆಯ್ಕೆಯಾದ ಸಹನಾ ಸ್ಟುಡಿಯೋ ಮಾಲಿಕರಾದ ಬಂಡ್ರಿ ಗಂಗಾಧರ ಇವರಿಗೆ ಛಾಯಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸನ್ಮಾನಿತರಾದ ಗಂಗಾಧರ ಇವರು ನನಗೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಆಶೀರ್ವಾದದಿಂದ ನನಗೆ ಛಾಯಾ ಪ್ರಶಸ್ತಿ ಸಿಕ್ಕಿದೆ
ನಾನು ಸುಮಾರು 31 ವರ್ಷದ ವೃತ್ತಿ ಮಾಡುತ್ತಾ ಬಂದಿದ್ದೇನೆ ನಾನು ಯಾವುದೇ ಮದುವೆ ಶುಭ ಸಮಾರಂಭಗಳಲ್ಲಿ ಸಹನೆ ತಾಳ್ಮೆಯಿಂದ ಗ್ರಾಹಕರನ್ನು ಕುಟುಂಬದ ಎಲ್ಲಾ ಸದಸ್ಯರ ಜೊತೆಗೆ ಸಂತೋಷದಿಂದ ವೃತ್ತಿ ಮಾಡುತ್ತಾ ಬಂದಿದ್ಧೆನೆ ನನಗೆ ಸನ್ಮಾನ ಮಾಡಿದ ರಾಜ್ಯಾಧ್ಯಕ್ಷರಿಗೆ ಹಾಗೂ ಎಲ್ಲಾ ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಈ ಸಂದರ್ಭದಲ್ಲಿ ಶ್ರೀ ಗುರು ಬಸವೇಶ್ವರ ಛಾಯಾಗ್ರಾಹಕರ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಕೆ ಸಿ ಕೊಟ್ರೇಶ್ ಗೌಡ ಮೈದೂರು ರಾಜೀವ್ ನಾಗಭೂಷಣ್ ನಾಗರಕಟ್ಟೆ ಗಣೇಶ್ ಶರತ್ ಬಾಬು ಹೊಂಬಳಘಟ್ಟಿ ವಿರೇಶ್ ವಿನಯ್ ಕುಮಾರ್ (ಮಲ್ಲ) ಕೆ ಅಯ್ಯನಹಳ್ಳಿ ಕರಿಬಸವರಾಜ (ಗುಬ್ಬಿ) ಕೊಟ್ರೇಶ್ ಬಾಲರಾಜ್ ಅಂಬಳಿ ಕಾಳಚಾರಿ ಇನ್ನೂ ಅನೇಕ ಛಾಯಾಗ್ರಾಹಕರು ನಮ್ಮ ತಾಲೂಕು ಮಟ್ಟದಲ್ಲಿ ಛಾಯಾ ಪ್ರಶಸ್ತಿ ಪ್ರದಾನ ಪುರಸ್ಕೃತರಾದ ಗಂಗಾಧರ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ