ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರು ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರ ಶೋಭಾಯಾತ್ರೆ

ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ಪೂಜೆ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಹೋಮ ಹವನ ಕಾರ್ಯಕ್ರಮ ನೆರವೇರಿತು.ನಂತರ ತಾಲೂಕ ಅಧ್ಯಕ್ಷ ಅವರು ಮೌನೇಶ ತಿಡಿಗೋಳ ಅವರು ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ವಿಶ್ವಕರ್ಮ ಧ್ವಜಾರೋಹಣ ನೆರವೇರಿಸಿದ ನಂತರ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಅವರು ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಸಿಂಧನೂರಿನ ಪ್ರಮುಖ ವೃತ್ತಗಳ ಮೂಲಕ ಮಹಿಳೆಯರ ಕಳಸಗಳೊಂದಿಗೆ ಶ್ರೀ ಭಗವಾನ್ ವಿಶ್ವಕರ್ಮ ಭಾವಚಿತ್ರ ಶೋಭಾಯಾತ್ರೆ ನಡೆಯಿತು. ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯವನ್ನು ವೆಂಕಟೇಶ ಸ್ವಾಮಿಗಳು ಏಕದಂಡಗಿ ಮಠ ಶಾಡಲಗೇರಿ,ಹಾಗೂ ನಾಗಲಿಂಗ ಆಚಾರ್ಯ ಪುರೋಹಿತರು ಬೇವಿನಾಳ,ಅಧ್ಯಕ್ಷತೆ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಉಧ್ಘಾಟಕರಾಗಿ ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು ಸಿಂಧನೂರು, ಅತಿಥಿಗಳಾಗಿ ರಾಜುಗೌಡ ಬಾದರ್ಲಿ,ಚನ್ನನಗೌಡ ಮೇಟಿ,ಕೆ.ರಾಜಶೇಖರ ನಗರಸಭೆ ಸದಸ್ಯರು, ಅಮರೇಗೌಡ ಮಲ್ಲಾಪೂರ ವನಸಿರಿ ಫೌಂಡೇಶನ್ ಅಧ್ಯಕ್ಷರು,ಹಿರಿಯ ಮುಖಂಡರು ಶಂಕ್ರಪ್ಪ ಸಾಹುಕಾರ ನಿಡಿಗೋಳ, ಸೋಮಣ್ಣ ಪತ್ತಾರ ಸುಕಲಪೇಟೆ,ವೀರೇಶ ದೇವರಗುಡಿ ಹಾಗೂ ರಾಯಚೂರು ಜಿಲಾ ಮುಖಂಡರು,ಸಿಂಧನೂರು, ಮಸ್ಕಿ,ಸಿರಗುಪ್ಪ,ಲಿಂಗಸೂಗೂರು ವಿಶ್ವಕರ್ಮ ಮುಖಂಡರುಗಳು ಹಾಗೂ ತಾಲೂಕ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು, ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು,ಯುವಕರು, ಮಹಿಳೆಯರು, ತಾಲೂಕಿನ ಹೋಬಳಿ ಗ್ರಾಮಗಳ ವಿಶ್ವಕರ್ಮ ಮುಖಂಡರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ