ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರೋಗ್ಯ ಭಾಗ್ಯ

ಮುಂಜಾನೆ ಇರಲಿ ಧ್ಯಾನ, ಯೋಗ
ದಿನಚರಿ ಆಗಲಿ ಕಾಲ್ನಡಿಗೆಯ ಭಾಗ
ಆರೋಗ್ಯಕರ ದೇಹವು ಆಗ ಸರಾಗ
ಹತ್ತಿರ ಸುಳಿಯದು ಯಾವ ರೋಗ.

ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿ
ತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿ
ಮಿಶ್ರ ಕಾಳುಗಳನ್ನು ಮೊಳಕೆ ಬರಿಸಿ
ದಿನವೂ ಊಟದಲ್ಲಿ ತಪ್ಪದೆ ಸೇವಿಸಿ.

ದಣಿದ ದೇಹಕ್ಕೆ ತಂಪು ಮಜ್ಜಿಗೆ
ಬಲದ ವೃದ್ಧಿಗೆ ರಾಗಿಯ ಸಜ್ಜಿಗೆ
ಪಚ್ಚ ಬಾಳೆಯು ಪಚನ ಕ್ರಿಯೆಗೆ
ಗಸಗಸೆ ಪಾಯಸ ಶುದ್ಧ ನಿದ್ರೆಗೆ.

ದ್ವಿದಳ ಧಾನ್ಯಗಳ ತರಿಸಿ ಬೇಯಿಸಿ
ಜೊತೆಗೆ ನಾರಿನಂಶ ಹೆಚ್ಚು ಬಳಸಿ
ಹಣ್ಣು ಹಂಪಲು ಸಿಹಿಯ ಸೇವಿಸಿ
ನಿಶ್ಯಕ್ತಿ ಕಳೆಯಿರಿ ಪೌಷ್ಟಿಕತೆ ಇರಿಸಿ.

ಉತ್ತಮ ಇದ್ದರೆ ನಮ್ಮ ದೇಹಾರೋಗ್ಯ
ಅದುವೇ ಎಲ್ಲರ ಪಾಲಿನ ಮಹಾಭಾಗ್ಯ
ಆರೋಗ್ಯವೇ ತಾನೇ ದೊಡ್ಡ ಸಂಪತ್ತು
ಕ್ರಮಬದ್ಧ ಶೈಲಿಯೇ ಜೀವಕ್ಕೆ ತಾಕತ್ತು.

ಪ್ಲಾಸ್ಟಿಕ್, ರಾಸಾಯನಿಕಗಳ ತ್ಯಜಿಸಿ
ಸ್ವಚ ಪರಿಸರ ಜಾಗೃತಿಗೆ ಕೈ ಜೋಡಿಸಿ
ಮನೆಗೊಂದು ಗಿಡ ನೆಟ್ಟು ನೀರುಣಿಸಿ
ಶುದ್ಧ ಗಾಳಿಯಿಂದ ನೆಮ್ಮದಿ ಜೀವಿಸಿ.

✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ: 9740199896.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ