ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕೀಯಕ್ಕಾಗಿ ಅಧಿಕಾರಕ್ಕಾಗಿ ಬಹು ಸಂಖ್ಯಾತ ಹಿಂದೂಗಳಿಗೆ ಎಸಗಿರುವ ಚಾರಿತ್ರಿಕ ದ್ರೋಹ ಈ ವಕ್ಫ್ ಕಾಯ್ದೆ!

ಬೆಳಗಾವಿ : ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಪಾಕಿಸ್ತಾನದಿಂದ ಭಾರತಕ್ಕೆ ತೆರಳಿದ ಹಿಂದೂಗಳ ಆಸ್ತಿಯನ್ನು ಸರ್ಕಾರದ ಆಸ್ತಿ ಎಂದು ಪಾಕಿಸ್ತಾನವು ಮುಟ್ಟುಗೋಲು ಹಾಕಿಕೊಂಡರೆ ಭಾರತದಲ್ಲಿ ವಾಸವಿದ್ದು ಪಾಕಿಸ್ತಾನಕ್ಕೆ ತೆರಳಿದ ಮುಸ್ಲಿಮರ ಆಸ್ತಿಯನ್ನು ರಕ್ಷಿಸಲು ಸ್ಥಾಪಿಸಿದ ಅರ್ಥವಿಲ್ಲದ ಕಾಯಿದೆ ಇಂದು ತಲೆತಲಾಂತರದಿಂದ ಕಾಯ್ದುಕೊಂಡು ಬಂದ ಹಿಂದೂಗಳ ಮನೆ, ಜಮೀನು, ತೋಟ, ದೇವಸ್ಥಾನ ಪ್ರತಿಯೊಂದು ಆಸ್ತಿಗಳ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಆಡಳಿತಾರೂಢ ಸರ್ಕಾರವು ತನ್ನ ತುಷ್ಟೀಕರಣ ನೀತಿಗಾಗಿ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ದುರಂತವೆಂದು ಪ್ರತಿಪಾದಿಸಿದರು.
ಶಿವಮೊಗ್ಗ ನಗರದಲ್ಲಿ ಕಾನೂನುಬಾಹಿರವಾಗಿ ಸಾರ್ವಜನಿಕರಿಗೆ ಸಂಬಂಧಪಟ್ಟ ಆಸ್ತಿಗಳಾದ ಡಿಸಿ ಆಫೀಸ್ ಮುಂಭಾಗದ ಪ್ರಾರ್ಥನಾ ಮೈದಾನ, ವಿನಾಯಕ ಟಾಕೀಸ್ ಪಕ್ಕದ ಮೈದಾನ ಮತ್ತು ಐತಿಹಾಸಿಕ ಸ್ಥಳವಾದ ನ್ಯೂ ಮಂಡಳಿಯಲ್ಲಿರುವ ರಾಜವಂಶಸ್ಥರ ಸಮಾಧಿ ಸ್ಥಳಗಳನ್ನು ವಕ್ಫ್ ಆಸ್ತಿಯೆಂದು ಸೂಚಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು ಈ ಅನ್ಯಾಯವನ್ನು ಸರಿದೂಗಿಸಿ ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರಿಗೆ ಸಂಬಂಧಪಟ್ಟ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ಪರಿಗಣಿಸುವ ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಬೇಕೆಂದು ದಾಖಲೆ ಸಹಿತವಾಗಿ ಸದನದಲ್ಲಿ ಹಾಗೂ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಈ ವಿಷಯದ ಬಗ್ಗೆ ಕೂಡಲೇ ಗಮನಹರಿಸಬೇಕಾಗಿ ತಿಳಿಸಲಾಯಿತು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ