ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಾತಿ, ಧರ್ಮ ಮೀರಿದ ಸಂತ ಸಿದ್ದೇಶ್ವರ ಸ್ವಾಮೀಜಿ : ಸಿದ್ದು ಆರಬೋಳ

ಯಾದಗಿರಿ/ ಶಹಾಪುರ : ಪ್ರವಚನ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತರೆನಿಸಿಕೊಂಡ, ನಡೆದಾಡುವ ದೇವರು, ಸರಳತೆಯ ಸಾಕಾರಮೂರ್ತಿ, ನುಡಿದಂತೆ ನಡೆದ ಶರಣ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಗಳು
ಮನುಕುಲಕ್ಕೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ನಗರ ಪ್ರಾಧಿಕಾರಿ ಯೋಜನಾ ಅಧ್ಯಕ್ಷರಾದ ಸಿದ್ದಣ್ಣ ಸಾಹು ಆರಬೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹಳಿಸಗರ ಬಡಾವಣೆಯಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಸಂಸ್ಥೆಯಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮಿಗಳು ಪ್ರಚಾರದಿಂದ ಬಲು ದೂರ ಇದ್ದುಕೊಂಡು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದರು, ಇಂತಹ ಮಹಾನ್ ವ್ಯಕ್ತಿಗಳ ಜೀವನ ನಮಗೆ ಆದರ್ಶವಾಗಬೇಕೆಂದು ಅವರು ನುಡಿದರು.
ನಂತರ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾತನಾಡಿದ ಅವರು ಸಿದ್ದೇಶ್ವರ ಸ್ವಾಮಿಗಳ ಜೀವನ ವಿವಾದ ರಹಿತ, ರಾಜಕೀಯ ಅಂತರ ಕಾಯ್ದುಕೊಂಡು ಯಾರನ್ನು ಓಲೈಸದೇ ಸದಾ ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿದ್ದವರಾಗಿದ್ದು, ಇಂತಹ ಸ್ವಾಮಿಗಳ ಹೆಸರಲ್ಲಿ ನೂತನ ಸಂಸ್ಥೆಯನ್ನು ಪ್ರಾರಂಭಿಸಿದ್ದ ಶೈಲಾ ಪ್ರದೀಪ ಅಣಬಿ ಅವರ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಲೆಯ ೫೫೦ ಕ್ಕೂ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ನ್ನು ಸಂಸ್ಥೆ ವತಿಯಿಂದ ಹಂಚಲಾಯಿತು. ಇದೇ ವೇಳೆ ನಗರಸಭೆ ಅಧ್ಯಕ್ಷರಾದ ಲಿಯಾಖತ ಪಾಷಾ, ನಗರಸಭೆ ಸದಸ್ಯರಾದ ರಾಧಿಕಾ ಶಾಂತಪ್ಪ ಗುತ್ತೇದಾರ ಹಳಿಸಗರ, ಬಸವರಾಜ ಚೆನ್ನೂರು, ಸತೀಶ ಪಂಚಬಾವಿ, ಅಹ್ಮದ ದಾದ್ದೂಲ್ಲಾ ಪತ್ರಕರ್ತರಾದ ಬಸವರಾಜ ಕರೇಗಾರ, ಮಲ್ಲಿಕಾರ್ಜುನ ಮಳಿಕೇರಿ, ಮರೆಪ್ಪ ಮುಂಡಾಸ, ಮಾನಪ್ಪ.ಸಿ.ಹಡಪದ, ಸುಭಾಷ ಹೋತಪೇಟ, ಸುನೀಲ ಹೊಸ್ಮನಿ ಗೋಗಿ, ಶಿವು ಶಿರವಾಳ, ಭೀಮನಗೌಡ ಎನ್ ಪೋಲಿಸ್ ಪಾಟೀಲ, ಮಹಮ್ಮದ ಇಸ್ಮಾಯಿಲ್ ತಿಮ್ಮಾಪುರಿ, ಸಿದ್ದು ಮುಂಡಾಸ, ಶಾಲೆಯ ಮುಖ್ಯಗುರುಗಳಾದ ರಾಜಣ್ಣ.ಎಸ್.ಗೊಟೂರು ಹಾಗೂ ಸಿಬ್ಬಂದಿ ವರ್ಗ ಮತ್ತು ಸದಸ್ಯರಾದ ಪ್ರದೀಪ ಅಣಬಿ, ಸುನಿಲ್ ಅಣಬಿ, ಭೋಜಪ್ಪ ಮುಂಡಾಸ, ಅಂಬರೀಶ್ ಶಿರವಾಳ್, ಸಂಗಮೇಶ ಬೇವಿನಹಳ್ಳಿ, ದೇವು, ಸುರೇಶ, ಶರಣು ದಿಗ್ಗಿ, ಪ್ರಕಾಶ ದಿಗ್ಗಿ, ಗಗನ ಅಣಬಿ, ಗೌತಮ ಅಣಬಿ ಹಾಗೂ ಶಾಲಾ ಮುದ್ದು ಮಕ್ಕಳ ಹಾಜರಿದ್ದರು. ಹಾಸ್ಯಕಲಾವಿದ ಸುನೀಲ ಶೀರ್ಣಿ ನಿರೂಪಿಸಿ ವಿವಿಧ ಮಿಮಿಕ್ರಿ ಕಲಾವಿದರ ಅನುಕರಣಿ ಮೂಲಕ ರಂಜಿಸಿದರು.

ವರದಿ: ಚೇತನ ಹಿರೇಮಠ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ