ಯಾದಗಿರಿ/ ಶಹಾಪುರ : ಪ್ರವಚನ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತರೆನಿಸಿಕೊಂಡ, ನಡೆದಾಡುವ ದೇವರು, ಸರಳತೆಯ ಸಾಕಾರಮೂರ್ತಿ, ನುಡಿದಂತೆ ನಡೆದ ಶರಣ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಗಳು
ಮನುಕುಲಕ್ಕೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ನಗರ ಪ್ರಾಧಿಕಾರಿ ಯೋಜನಾ ಅಧ್ಯಕ್ಷರಾದ ಸಿದ್ದಣ್ಣ ಸಾಹು ಆರಬೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹಳಿಸಗರ ಬಡಾವಣೆಯಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಸಂಸ್ಥೆಯಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮಿಗಳು ಪ್ರಚಾರದಿಂದ ಬಲು ದೂರ ಇದ್ದುಕೊಂಡು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದರು, ಇಂತಹ ಮಹಾನ್ ವ್ಯಕ್ತಿಗಳ ಜೀವನ ನಮಗೆ ಆದರ್ಶವಾಗಬೇಕೆಂದು ಅವರು ನುಡಿದರು.
ನಂತರ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾತನಾಡಿದ ಅವರು ಸಿದ್ದೇಶ್ವರ ಸ್ವಾಮಿಗಳ ಜೀವನ ವಿವಾದ ರಹಿತ, ರಾಜಕೀಯ ಅಂತರ ಕಾಯ್ದುಕೊಂಡು ಯಾರನ್ನು ಓಲೈಸದೇ ಸದಾ ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿದ್ದವರಾಗಿದ್ದು, ಇಂತಹ ಸ್ವಾಮಿಗಳ ಹೆಸರಲ್ಲಿ ನೂತನ ಸಂಸ್ಥೆಯನ್ನು ಪ್ರಾರಂಭಿಸಿದ್ದ ಶೈಲಾ ಪ್ರದೀಪ ಅಣಬಿ ಅವರ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಲೆಯ ೫೫೦ ಕ್ಕೂ ವಿದ್ಯಾರ್ಥಿಗಳಿಗೆ ನೋಟ್ ಬುಕ್ನ್ನು ಸಂಸ್ಥೆ ವತಿಯಿಂದ ಹಂಚಲಾಯಿತು. ಇದೇ ವೇಳೆ ನಗರಸಭೆ ಅಧ್ಯಕ್ಷರಾದ ಲಿಯಾಖತ ಪಾಷಾ, ನಗರಸಭೆ ಸದಸ್ಯರಾದ ರಾಧಿಕಾ ಶಾಂತಪ್ಪ ಗುತ್ತೇದಾರ ಹಳಿಸಗರ, ಬಸವರಾಜ ಚೆನ್ನೂರು, ಸತೀಶ ಪಂಚಬಾವಿ, ಅಹ್ಮದ ದಾದ್ದೂಲ್ಲಾ ಪತ್ರಕರ್ತರಾದ ಬಸವರಾಜ ಕರೇಗಾರ, ಮಲ್ಲಿಕಾರ್ಜುನ ಮಳಿಕೇರಿ, ಮರೆಪ್ಪ ಮುಂಡಾಸ, ಮಾನಪ್ಪ.ಸಿ.ಹಡಪದ, ಸುಭಾಷ ಹೋತಪೇಟ, ಸುನೀಲ ಹೊಸ್ಮನಿ ಗೋಗಿ, ಶಿವು ಶಿರವಾಳ, ಭೀಮನಗೌಡ ಎನ್ ಪೋಲಿಸ್ ಪಾಟೀಲ, ಮಹಮ್ಮದ ಇಸ್ಮಾಯಿಲ್ ತಿಮ್ಮಾಪುರಿ, ಸಿದ್ದು ಮುಂಡಾಸ, ಶಾಲೆಯ ಮುಖ್ಯಗುರುಗಳಾದ ರಾಜಣ್ಣ.ಎಸ್.ಗೊಟೂರು ಹಾಗೂ ಸಿಬ್ಬಂದಿ ವರ್ಗ ಮತ್ತು ಸದಸ್ಯರಾದ ಪ್ರದೀಪ ಅಣಬಿ, ಸುನಿಲ್ ಅಣಬಿ, ಭೋಜಪ್ಪ ಮುಂಡಾಸ, ಅಂಬರೀಶ್ ಶಿರವಾಳ್, ಸಂಗಮೇಶ ಬೇವಿನಹಳ್ಳಿ, ದೇವು, ಸುರೇಶ, ಶರಣು ದಿಗ್ಗಿ, ಪ್ರಕಾಶ ದಿಗ್ಗಿ, ಗಗನ ಅಣಬಿ, ಗೌತಮ ಅಣಬಿ ಹಾಗೂ ಶಾಲಾ ಮುದ್ದು ಮಕ್ಕಳ ಹಾಜರಿದ್ದರು. ಹಾಸ್ಯಕಲಾವಿದ ಸುನೀಲ ಶೀರ್ಣಿ ನಿರೂಪಿಸಿ ವಿವಿಧ ಮಿಮಿಕ್ರಿ ಕಲಾವಿದರ ಅನುಕರಣಿ ಮೂಲಕ ರಂಜಿಸಿದರು.
ವರದಿ: ಚೇತನ ಹಿರೇಮಠ
