ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಸೆಂಬ ಮಾಯೆ

ನೀ ಕಾಣುವ ಕನಸು ಒಳ್ಳೆಯದಿರಲಿ
ಕಲ್ಮಶವು ತುಂಬಿರದೆ ಶುಭ್ರವಾಗಿರಲಿ
ನಾನೆಂಬ ಅಹಂಕಾರವು ಇಣುಕದಿರಲಿ
ನಿಸ್ವಾರ್ಥ ಗುಣವು ನಿನ್ನಲ್ಲಿ ಅಡಗಿರಲಿ.

ಪರಿಶುದ್ಧ ಮನದಿ ಸ್ಥಿರತೆ ತುಂಬಿರಲಿ
ಚಂಚಲತೆ ಕೈಗೆ ಬುದ್ಧಿ ಹೋಗದಿರಲಿ
ಸದ್ಗುಣ ಸನ್ಮಾರ್ಗದ ನಡೆ ಕೂಡಿರಲಿ
ಕಾಯಕವೇ ಕೈಲಾಸ ತತ್ವವು ಇರಲಿ.

ಸೋಲೇ ತಾನೇ ಗೆಲುವಿನ ಸೋಪಾನ
ಸೋತು ನಡೆಯುತಿರೆ ನೀನು ಪ್ರತಿ ದಿನ
ಸರಾಗ ಸಾಗುವುದು ನೆಮ್ಮದಿ ಜೀವನ
ನೀನಾಗುವೆ ಆಗ ದೈವರೂಪ ಸಮಾನ.

ನಿನ್ನಯ ಸಾಧನೆಯ ಕಡೆಗೆ ಗಮನವಿಟ್ಟು
ಕನ್ನಡಾಂಬೆಯ ಸೇವೆಯ ಮನದಲಿಟ್ಟು
ಸಮಾಜದ ಏಳಿಗೆಗೆ ಸದಾ ಪಣತೊಟ್ಟು
ಸಾಗುತಿರು ನೀ ದುಷ್ಟ ಗುಣಗಳ ಬಿಟ್ಟು.

ಕನಸು ಕಾಣುವುದು ಎಂದೆಂದೂ ತಪ್ಪಲ್ಲ
ತಿರುಕನ ಬದುಕು ಬಾಳುವುದು ಒಳಿತಲ್ಲ
ಒಳಿತು ಕೆಡುಕುಗಳ ಗುಣಾಕಾರ ಬೇಕಲ್ಲಾ
ಧರ್ಮದ ಮಾರ್ಗವೇ ಇರಲಿ ನಮಗೆಲ್ಲಾ.

  • ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
    (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
    ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
    ದೂರವಾಣಿ ಸಂಖ್ಯೆ:-9740199896.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ