ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಚೆಲುವ ಕನ್ನಡ’

ಕನ್ನಡವೆಂದರೆ ಬರಿ ಪದವಲ್ಲ
ಅಪಾರಜ್ಞಾನ ಸುಧೆಯ ಭಂಡಾರ
ಕರ್ನಾಟಕವೆಂದರೆ ಬರಿ ನಾಡಲ್ಲ
ಕೋಟ್ಯಾಂತರ ಜೀವನಾಡಿಗಳ ಆಗರ

ಕನ್ನಡವೆಂದರೆ ಕೇವಲ ನುಡಿಯಲ್ಲ
ಸಂಗೀತ ಸಾಹಿತ್ಯ ಕಲಾ ರಸಿಕರ ಕುಸುಮ
ಕರ್ನಾಟಕವೆಂದರೆ ಬರಿ ರಾಜ್ಯವಲ್ಲ
ಶ್ರೀಗಂಧ ಪಾವನ ತೀರ್ಥಗಳ ಸಂಗಮ

ಕನ್ನಡವೆಂದರೆ ಬರಿ ಕೋಶವಲ್ಲ
ಜ್ಞಾನಪೀಠ ಪಾರಿತೋಷಕಗಳ ಸಂಭ್ರಮ
ಕರ್ನಾಟಕವೆಂದರೆ ಕೇವಲ ಭೂಪಟವಲ್ಲ
ಕಲ್ಪತರು ದಾನ ದಾಸೋಹಿಗಳ ಉಗಮ

ಕನ್ನಡವೆಂದರೆ ಬರಿ ಉತ್ಸವವಲ್ಲ
ರವಿ ಶಶಿ ತಾರೆಯರ ನಿತ್ಯೋತ್ಸವ
ಕರ್ನಾಟಕವೆಂದರೆ ಬರಿ ತಾಣವಲ್ಲ
ಕಲಿತವರಿಗೆ ಅಮೃತ ನೆನೆದವರಿಗೆ ನೆರಳು

ಕನ್ನಡವೆಂದರೆ ಬರಿ ಸುಂದರ ಕಾವ್ಯವಲ್ಲ
ಸಾವಿರಾರು ವರುಷಗಳ ಇತಿಹಾಸ
ಕರ್ನಾಟಕವೆಂದರೆ ಬರಿ ನವೆಂಬರ್ ಒಂದಲ್ಲ
ಜೀವ ಗತ ಗತಾನುಕಾಲದ ಮಂದಹಾಸ
ಬೆಳೆಸಿ ಗೌರವಿಸುವುದು ನಮ್ಮ ಕೆಲಸ

  • ಸತೀಶ ಗೋಡಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ