ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವರ್ಣ ನಂದಿನಿ ಗೋ ಸಂಸ್ಥಾನದ ಶಂಕುಸ್ಥಾಪನೆ

ಶಿರಸಿ : ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗ ಸಂಸ್ಥೆಯಾಗಿರುವ ಯಲ್ಲಾಪುರದ ಶ್ರೀ ಗೋವರ್ಧನ (ರಿ.) ಗೋಶಾಲೆಯ ನಿಯೋಜಿತ ಹೊಸ ಕಟ್ಟಡ ಸ್ವರ್ಣ ನಂದಿನಿ ಗೋಸಂಸ್ಥಾನದ ಅಡಿಗಲ್ಲು ಸ್ಥಾಪನೆ ಕಾರ್ಯಕ್ರಮವು ದಿ-03-02-2025 ಸೋಮವಾರದ ಗೋಧೂಳಿ ಮುಹೂರ್ತದಲ್ಲಿ ಪರಮಪೂಜ್ಯ ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನೆರವೇರಿತು.
ಗೋಶಾಲೆಯ ಎಲ್ಲಾ ಗೋವುಗಳಿಗೆ ಪೂಜ್ಯ ಶ್ರೀಗಳು ಫಲಗ್ರಾಸ ನೀಡಿದರು. ಸೇರಿದ್ದ ಗೋಶಾಲೆಯ ಆಡಳಿತ ಸಮಿತಿಯ ಸದಸ್ಯರನ್ನು, ಗೋಶಾಲೆಯ ಎಲ್ಲಾ ದಾನಿಗಳನ್ನು, ಸಹಕಾರಿಗಳನ್ನು, ಗೋಸೇವಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿ, ಗೋರಕ್ಷಣೆ ಎಂದರೆ ಧರ್ಮ ಸಂರಕ್ಷಣೆಯ ಇನ್ನೊಂದು ಮುಖವೇ ಆಗಿದೆ, ಭಾರತೀಯ ಗೋತಳಿಯ ಉಳಿವಿನಲ್ಲಿ ನಮ್ಮ ಉತ್ತಮ ಆರೋಗ್ಯ, ಯಶಸ್ವಿ ಸಾವಯವ ಕೃಷಿ ಅಡಗಿದೆ. ಉಳಿದಿರುವ ಅಮೂಲ್ಯ ಗೋ ತಳಿಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಅನಾಥವೆನಿಸುವ ಎಲ್ಲಾ ಗೋವುಗಳಿಗೂ ಶ್ರೀ ಗೋವರ್ಧನ ಗೋಶಾಲೆ ಆಶ್ರಯ ತಾಣವಾಗಲಿ, ಸೀಮಾತೀತವಾಗಿ ಈ ಕಾರ್ಯಕ್ಕೆ ಹೆಚ್ಚಿನ ಸಹಕಾರ ಸಿಗುವಂತಾಗಲೆಂದು ಸುವರ್ಣ ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ