ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‍ನಡೆದಾಡುವ ದೇವರು

ನೋಡು ಬಾ
ಕಣ್ತೆರೆದು ನೋಡು ಬಾ,
ನಡೆದಾಡುವ ದೇವರ
ನೀನೊಮ್ಮೆ ನೋಡು ಬಾ.

ಅಂಧ ಗುರುವನ್ನು ಪಡೆದ ಶಿಷ್ಯ
ತಾನಂಧನಿದ್ದೂ ಬೆಳಗಿಸಿದ,
ಸಂಗೀತ ಪ್ರಪಂಚವ, ಅದರಲಿ
ಮಿನುಗುವ ಅಪಾರ ನಕ್ಷತ್ರಗಳ
ನೀನೊಮ್ಮೆ ನೋಡು ಬಾ.

ಪುಣ್ಯಾಶ್ರಮದ ಭಾರ ಹೊತ್ತ
ತರುಳ ಪುಟ್ಟರಾಜ,
ಅಂಧ-ಅನಾಥರ ಕಾಳಜಿಯಲ್ಲಿ
ಶಿವನನ್ನು ಕಂಡಿದ್ದು,
ನೀನೊಮ್ಮೆ ನೋಡು ಬಾ.

ಅಧಿಕಾರ, ಉಡುಗೆ – ತೊಡುಗೆಯ
ವ್ಯಾಮೋಹ ಇಲ್ಲದವರ,
ಸದಾ ಭಕ್ತರ ಸಂತಸದಲ್ಲಿಯೇ,
ಆತ್ಮತೃಪ್ತಿ ಕಂಡವರ
ನೀನೊಮ್ಮೆ ನೋಡು ಬಾ.

ಸಂಗೀತ-ಸಾಹಿತ್ಯ ಆಧ್ಯಾತ್ಮದಲ್ಲಿ
ತೋರಿದ ಸಾಧನೆಯ,
ನವರಸ ಮೇಳೈಸಿ ವಾದ್ಯ ಬಳಸಿ
ಪ್ರವಚನ ನೀಡಿದವರ,
ನೀನೊಮ್ಮೆ ನೋಡು ಬಾ.

ಉಭಯ ಗಾಯನ ವಿಶಾರದ
ಪಂಚಾಕ್ಷರ ವಾಣಿಯ ಚಾಲಕ,
ಸಕಲ ವಾದ್ಯ ಕಂಠೀರವ
ತ್ರಿಭಾಷಾ ಕವಿರತ್ನ ಧುರೀಣರ,
ನೀನೊಮ್ಮೆ ನೋಡು ಬಾ.

ಅಗಣಿತ ಪ್ರಶಸ್ತಿ-ಪುರಸ್ಕಾರ,
ತುಲಾಭಾರಗಳ ಚಕ್ರವರ್ತಿಯ
ಗದುಗಿನ ಗಾನಯೋಗಿ
ಪಂಡಿತ ಶ್ರೀ ಪುಟ್ಟಯ್ಯಜ್ಜನ
ನೀನೊಮ್ಮೆ ನೋಡು ಬಾ

ನೋಡು ಬಾ
ಕಣ್ತೆರೆದು ನೋಡು ಬಾ
ನಡೆದಾಡುವ ದೇವರ
ನೀನೊಮ್ಮೆ ನೋಡು ಬಾ.

✍️ ಬಸವರಾಜ ಐಲಿ, ಶಿಕ್ಷಕರು
ಸ.ಮಾ.ಹಿ.ಪ್ರಾ.ಶಾಲೆ , ಹುಲಿಹೈದರ. 8197511245.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ