ವಿಜಯನಗರ /ಹಗರಿಬೊಮ್ಮನಹಳ್ಳಿ: ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಬಿ. ಎನ್. ಜಗದೀಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡಾ) ದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಗಳಿ ತಾಂಡದ ಮಕ್ಕಳಿಗೆ ಪೆನ್ನು , ಪುಸ್ತಕಗಳನ್ನು ವಿತರಣೆ ಮಾಡಿ ರಾಜ್ಯಾಧ್ಯಕ್ಷರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದೆವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆಯನ್ನ ಜಯ ಕರ್ನಾಟಕ ಸಂಘಟನೆಯಿಂದ ಶಾಲೆಯಲ್ಲಿ ಕೆಲಸಗಳನ್ನು ಮಾಡುತ್ತೇವೆ ಎಂದು ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಘಟಕದ ಕಾರ್ಯಾಧ್ಯಕ್ಷರಾದ ಎಲ್. ಸಂತೋಷ್ ಶಾಲೆಯ ಮಾಲವಿ ಗ್ರಾಮ ಘಟಕದ ಅಧ್ಯಕ್ಷ ಅಭಿಷೇಕ್ ಭೋವಿ, ಎಸ್. ಡಿ.ಎಂ.ಸಿ ಅಧ್ಯಕ್ಷರಾದ ತೇಜ್ಯ ನಾಯ್ಕ್ ಶಾಲೆಯ ಹೆಚ್ ಎಂ ಟೀಕ್ಯಾನಾಯ್ಕ ಎಸ್ ಸಂಘಟನಾ ಕಾರ್ಯದರ್ಶಿ ಕೃಷ್ಣ ನಾಯ್ಕ್ , ರಘುಪತಿ ನಾಯ್ಕ್ , ವಿಜಯ್ ಕುಮಾರ್ , ಸದಸ್ಯಗಳಾದ ರವಿ ನಾಯ್ಕ್ , ವಿನೋದ್ ನಾಯ್ಕ್, ಉಮಾಪತಿ, ಕಿರಣ್ , ಮಲ್ಲ ನಾಯ್ಕ್ ಶಾಲೆಯ ಸಿಬ್ಬಂದಿ ವರ್ಗದವರು ಇದ್ದರು.
- ಕರುನಾಡ ಕಂದ