ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಗೋಶಾಲೆಗೆ ಸ್ಥಳಾಂತರಿಸಿ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಕ್ರಮ ವಹಿಸಿದ ಪುರಸಭೆ

ಬಳ್ಳಾರಿ/ ಕಂಪ್ಲಿ: ಮಾ.06. ಕಳೆದ ಕೆಲ ವರ್ಷಗಳಿಂದ ಕಂಪ್ಲಿ ಪಟ್ಟಣದಲ್ಲಿ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಕಂಪ್ಲಿ ಪುರಸಭೆ ಮುಂದಾಗಿದೆ.
ಇಲ್ಲಿನ ಬಿಡಾಡಿ ದನಗಳನ್ನು ಕಳೆದ ರಾತ್ರಿ ಹಿಡಿದು, ದೇವಸಮುದ್ರ ಕ್ರಾಸ್ ಬಳಿಯಲ್ಲಿರುವ ಕಲ್ಯಾಣಚೌಕಿ ಮಠದ ಗೋಶಾಲೆಗೆ ಸಾಗಿಸಲಾಗಿದೆ. ಮೊದಲ ದಿನದಂದು ಮೂರು ದನಗಳನ್ನು ಗೋಶಾಲೆಗೆ ಬಿಟ್ಟು, ಯಾವುದೇ ಕಾರಣಕ್ಕೂ ದನಗಳನ್ನು ಗೋಶಾಲೆಯಿಂದ ಬಿಡಬಾರದು ಎಂಬ ನಿಬಂಧನೆಗಳನ್ನು ಪಾಲಿಸಲಾಗಿದೆ.
ಇಲ್ಲಿನ ಬೀದಿ ದನಕರುಗಳ ಹಾವಳಿಗೆ ಜನರು ಮತ್ತು ಸವಾರರು ಬೇಸತ್ತಿದ್ದರು. ಈ ದನಗಳನ್ನು ಗೋಶಾಲೆಗೆ ಸಾಗಿಸಬೇಕೆಂಬ ಒತ್ತಡಗಳು ಪ್ರತಿ ಸಭೆಯಲ್ಲಿ ವ್ಯಕ್ತವಾಗಿದ್ದವು. ಅದರಂತೆ ಈಗ ಪುರಸಭೆ ಹಿರಿಯ ನೈರ್ಮಲ್ಯ ಅಧಿಕಾರಿ ಪ್ರಕಾಶಬಾಬು ನೇತೃತ್ವದಲ್ಲಿ ಪೌರ ಕಾರ್ಮಿಕರ ಮೂಲಕ ಮೂರು ದನಗಳನ್ನು ಹಿಡಿದು, ವಾಹನದ ಮೂಲಕ ಗೋಶಾಲೆಗೆ ಸಾಗಿಸಲಾಗಿದೆ. ಇನ್ನೂ ಬಹಳಷ್ಟು ಬಿಡಾಡಿ ದನಗಳಿದ್ದು, ಅವುಗಳನ್ನು ಗೋಶಾಲೆಗೆ ಸಾಗಿಸಲು ಪುರಸಭೆ ಮುಂದಾಗಿದೆ.
ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ ಸಾಮಾನ್ಯ ಸಭೆಯಲ್ಲಿ ಇಲ್ಲಿನ ಬಿಡಾಡಿ ದನಗಳ ಉಪಟಳ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ ಹಿನ್ನಲೆ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ನಿರ್ದೇಶನದ ಮೇರೆಗೆ ಪಟ್ಟಣದಲ್ಲಿರುವ ದನಗಳನ್ನು ಗೋಶಾಲೆಗೆ ರವಾನಿಸಲು ಸೂಕ್ತ ಕ್ರಮವಹಿಸಲಾಗಿದೆ. ಮೊದಲ ದಿನದಂದು ಮೂರು ದನಗಳನ್ನು ಕಲ್ಯಾಣಚೌಕಿ ಮಠದ ಗೋಶಾಲೆಗೆ ಸಾಗಿಸಲಾಗಿದೆ. ಗೋಶಾಲೆಗೆ ಬಂದಂತಹ ದನಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದಂದು ಸೂಚಿಸಲಾಗಿದೆ. ಇನ್ನೂ ಪಟ್ಟಣದಲ್ಲಿ ಬಿಡಾಡಿ ದನಗಳಿದ್ದು, ಎಲ್ಲಾ ದನಗಳನ್ನು ಗೋಶಾಲೆಗೆ ಸಾಗಿಸಲಾಗುವುದು. ಕೂಡಲೇ ಮಾಲೀಕರು ಬೀದಿಗೆ ಬಿಟ್ಟಿರುವ ದನಗಳನ್ನು ಮನೆಗೆ ಹೊಡೆದುಕೊಂಡು ಹೋಗಿ ಕಟ್ಟಿಕೊಳ್ಳಬೇಕು. ದನಗಳನ್ನು ಗೋಶಾಲೆಗೆ ಬಿಟ್ಟ ಮೇಲೆ ಹೊರಗಡೆ ತರುವುದಿಲ್ಲ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದರು.

ವರದಿ : ಜಿಲಾನ್ ಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ