ಬೆಂಗಳೂರು : ಮಾತಿನ ಮನೆಯ ನೂರರ ಸಂಭ್ರಮ ನೂರು, ಮೆಚ್ಚುಗೆ ನೂರಾರು
ಮಾತಿನ ಮನೆಯ ಕಾರ್ಯಕ್ರಮಗಳು ನಿಜಕ್ಕೂ ಉತ್ತಮ, ಮಾತಿನ ಮನೆಯ ನೂರನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಹೆಮ್ಮೆ ಎನ್ನಿಸುತ್ತಿದೆ ಈ ಸಂದರ್ಭದಲ್ಲಿ ಐವರು ಉತ್ಕೃಷ್ಠ ವ್ಯಕ್ತಿಗಳನ್ನು ಆರಿಸಿ ಅವರನ್ನು ಗೌರವಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ” ಥಟ್ ಅಂತ ಹೇಳಿ ” ಖ್ಯಾತಿಯ ಶ್ರೀ ನಾ ಸೋಮೇಶ್ವರ ಹೇಳಿದ ಅವರು ಮಾತಿನ ಮನೆಯ ನೂರನೆಯ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಾ ನೂರು ಕಾರ್ಯಕ್ರಮಗಳೆಂದರೆ ಸಾಮಾನ್ಯ ಸಾಧನೆಯಲ್ಲ, ರಾ ಸು ಅವರ ಈ ಸಾಧನೆಯನ್ನು ಎಲ್ಲರೂ ಪ್ರಶಂಸಿಸಬೇಕು ಎಂದು ಹೇಳಿದರು.
ಮಾತಿನ ಮನೆ ನಡೆದುಬಂದ ಹಾದಿಯನ್ನು ಶ್ರೀಮತಿ ಸಹನಾ ರಾಜೇಶ್ ಅವರು ವಿವರಿಸಿದರು.
ಇದೇ ಸಂಧರ್ಭದಲ್ಲಿ ಮಾತಿನ ಮನೆಯ ನೂರು
ಕಾರ್ಯಕ್ರಮಗಳ ಪರಿಚಯ ಮಾಡಿಸುವ ವಿಡಿಯೋವನ್ನು ಪ್ರದರ್ಶಿಸಲಾಯಿತು.
9/3/2025ರ ಭಾನುವಾರ ಸಂಜೆ 5:30ರಿಂದ ಎರಡೂವರೆ ತಾಸುಗಳು ನಡೆದ ವಿಶೇಷ ನೂರರ ಸಂಭ್ರಮ ಕಾರ್ಯಕ್ರಮವು ಮಾತಿನ ಮನೆಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ವಿದ್ವಾನ್ ಕಾರ್ತಿಕ್ ಅವರ ಮ್ಯಾಂಡೋಲಿನ್ ವಾದನ, ನಂದಿನಿ ಸಿರೀಶ್ ಅವರ ಹಾಡುಗಳು, ಎಂ ಪ್ರಭು ಅವರ ಜಾದೂ ಪ್ರದರ್ಶನ, ಬೇಲೂರು ರಾಮಮೂರ್ತಿಯವರ ಹಾಸೋಪನ್ಯಾಸ ಹಾಗೂ ರಾಜೇಶ್ ಕಶ್ಯಪ್ ತಂಡದ ಹಾಸ್ಯ ಪ್ರಹಸನಗಳು ನೆರೆದಿದ್ದವರನ್ನು ರಂಜಿಸಿದವು.
ಇದೇ ಸಂದರ್ಭದಲ್ಲಿ ವಿದ್ವಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥ ಸಾರಥಿಗಳು, ನಾ. ಸೋಮೇಶ್ವರ, ಎಂಎಸ್ ನರಸಿಂಹಮೂರ್ತಿ, ಡಾ ಮಾಲತಿಹೊಳ್ಳ ಹಾಗೂ ಬೈರಮಂಗಲ ರಾಮೇಗೌಡ ಅವರನ್ನು ಮಾತಿನ ಮನೆಯ ಪರವಾಗಿ ಗೌರವಿಸಲಾಯಿತು.
2020 ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆರಂಭವಾದ ಮಾತಿನ ಮನೆಯು ಪ್ರತಿ ತಿಂಗಳಿಗೊಂದು ಎಂಬಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು, ಇದೀಗ ನೂರರ ಸಂಭ್ರಮದಲ್ಲಿದೆಯೆಂದು ಮಾತಿನ ಮನೆಯ ರಾ.ಸು ವೆಂಕಟೇಶ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿ ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ರಂಜಿತಾ ರಾಮ್ ಕುಮಾರ್, ರಾಧಾ ಕೇಶವ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ