ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ಮಾತಿನ ಮನೆ” ಯ ನೂರರ ಸಂಭ್ರಮ

ಬೆಂಗಳೂರು : ಮಾತಿನ ಮನೆಯ ನೂರರ ಸಂಭ್ರಮ ನೂರು, ಮೆಚ್ಚುಗೆ ನೂರಾರು
ಮಾತಿನ ಮನೆಯ ಕಾರ್ಯಕ್ರಮಗಳು ನಿಜಕ್ಕೂ ಉತ್ತಮ, ಮಾತಿನ ಮನೆಯ ನೂರನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಹೆಮ್ಮೆ ಎನ್ನಿಸುತ್ತಿದೆ ಈ ಸಂದರ್ಭದಲ್ಲಿ ಐವರು ಉತ್ಕೃಷ್ಠ ವ್ಯಕ್ತಿಗಳನ್ನು ಆರಿಸಿ ಅವರನ್ನು ಗೌರವಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ” ಥಟ್ ಅಂತ ಹೇಳಿ ” ಖ್ಯಾತಿಯ ಶ್ರೀ ನಾ ಸೋಮೇಶ್ವರ ಹೇಳಿದ ಅವರು ಮಾತಿನ ಮನೆಯ ನೂರನೆಯ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಾ ನೂರು ಕಾರ್ಯಕ್ರಮಗಳೆಂದರೆ ಸಾಮಾನ್ಯ ಸಾಧನೆಯಲ್ಲ, ರಾ ಸು ಅವರ ಈ ಸಾಧನೆಯನ್ನು ಎಲ್ಲರೂ ಪ್ರಶಂಸಿಸಬೇಕು ಎಂದು ಹೇಳಿದರು.

ಮಾತಿನ ಮನೆ ನಡೆದುಬಂದ ಹಾದಿಯನ್ನು ಶ್ರೀಮತಿ ಸಹನಾ ರಾಜೇಶ್ ಅವರು ವಿವರಿಸಿದರು.
ಇದೇ ಸಂಧರ್ಭದಲ್ಲಿ ಮಾತಿನ ಮನೆಯ ನೂರು
ಕಾರ್ಯಕ್ರಮಗಳ ಪರಿಚಯ ಮಾಡಿಸುವ ವಿಡಿಯೋವನ್ನು ಪ್ರದರ್ಶಿಸಲಾಯಿತು.

9/3/2025ರ ಭಾನುವಾರ ಸಂಜೆ 5:30ರಿಂದ ಎರಡೂವರೆ ತಾಸುಗಳು ನಡೆದ ವಿಶೇಷ ನೂರರ ಸಂಭ್ರಮ ಕಾರ್ಯಕ್ರಮವು ಮಾತಿನ ಮನೆಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ವಿದ್ವಾನ್ ಕಾರ್ತಿಕ್ ಅವರ ಮ್ಯಾಂಡೋಲಿನ್ ವಾದನ, ನಂದಿನಿ ಸಿರೀಶ್ ಅವರ ಹಾಡುಗಳು, ಎಂ ಪ್ರಭು ಅವರ ಜಾದೂ ಪ್ರದರ್ಶನ, ಬೇಲೂರು ರಾಮಮೂರ್ತಿಯವರ ಹಾಸೋಪನ್ಯಾಸ ಹಾಗೂ ರಾಜೇಶ್ ಕಶ್ಯಪ್ ತಂಡದ ಹಾಸ್ಯ ಪ್ರಹಸನಗಳು ನೆರೆದಿದ್ದವರನ್ನು ರಂಜಿಸಿದವು.

ಇದೇ ಸಂದರ್ಭದಲ್ಲಿ ವಿದ್ವಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥ ಸಾರಥಿಗಳು, ನಾ. ಸೋಮೇಶ್ವರ, ಎಂಎಸ್ ನರಸಿಂಹಮೂರ್ತಿ, ಡಾ ಮಾಲತಿಹೊಳ್ಳ ಹಾಗೂ ಬೈರಮಂಗಲ ರಾಮೇಗೌಡ ಅವರನ್ನು ಮಾತಿನ ಮನೆಯ ಪರವಾಗಿ ಗೌರವಿಸಲಾಯಿತು.

2020 ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆರಂಭವಾದ ಮಾತಿನ ಮನೆಯು ಪ್ರತಿ ತಿಂಗಳಿಗೊಂದು ಎಂಬಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು, ಇದೀಗ ನೂರರ ಸಂಭ್ರಮದಲ್ಲಿದೆಯೆಂದು ಮಾತಿನ ಮನೆಯ ರಾ.ಸು ವೆಂಕಟೇಶ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿ ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ರಂಜಿತಾ ರಾಮ್ ಕುಮಾರ್, ರಾಧಾ ಕೇಶವ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ