ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸುಕ್ಷೇತ್ರ ಬಸವಕಲ್ಯಾಣ

ಬೀದರ/ ಬಸವಕಲ್ಯಾಣ: ಜಗದೊಡೆಯ ಪರಮಾತ್ಮನ ಅಪರಾವತಾರಿಯಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಯುಗಗಳಲ್ಲಿ ವಿವಿಧ ನಾಮಗಳಿಂದ ಅವತರಿಸಿದ ಯುಗಪುರುಷರಾಗಿದ್ದು ಸಕಲ ಸದ್ಭಕ್ತರಿಗೆ ಮಾನವ ಧರ್ಮ ಬೋಧಿಸಿ ಉದ್ದರಿಸಿದವರಾಗಿದ್ದಾರೆ. ಎಲ್ಲೆಡೆಯಂತೆ ಅನೇಕ ವರ್ಷಗಳಿಂದ ಸುಕ್ಷೇತ್ರ ಬಸವಕಲ್ಯಾಣದಲ್ಲಿ ಪೂಜ್ಯ ಗುರುಗಳ ದಿವ್ಯ ಸಾನಿದ್ಯದಲ್ಲಿ ಸಕಲ ಸದ್ಭಕ್ತರು ಸೇರಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷದಿಂದ ಕರ್ನಾಟಕ ಸರಕಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಆಚರಿಸಲು ಆದೇಶಿಸಿ ಜಯಂತಿ ಯುಗಮಾನೋತ್ಸವವನ್ನು ಪ್ರಾರಂಭಿಸಿದ್ದು ಸಕಲ ಸದ್ಭಕ್ತರಿಗೆ ಅಪಾರ ಸಂತೋಷ ಉಂಟುಮಾಡಿದೆ. ಈ ಕಾರಣಕ್ಕಾಗಿ ಭಕ್ತರು ಕರ್ನಾಟಕ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ಶಿವಶರಣರ ಕಾಯಕ ಭೂಮಿಯಾದ ಸುಕ್ಷೇತ್ರ ಬಸವಕಲ್ಯಾಣದಲ್ಲಿ ಪೂಜ್ಯ ಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ತಾಲೂಕಾ ಅಡಳಿತ ಹಾಗೂ ಸಕಲ ಸದ್ಭಕ್ತರು ಸೇರಿ ಫಾಲ್ಗುಣ ಶುದ್ಧ ತ್ರಯೋದಶಿ ಯಂದು ದಿನಾಂಕ 12-03-2025 ರಂದು ಬುಧವಾರ ಬೆಳಿಗ್ಗೆ 09-00 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮತ್ತು ಅಲಂಕೃತವಾದ ರಥದ ಮೇಲೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಭವ್ಯ ಮೇರವಣಿಗೆಯನ್ನು ವೈಭವದಿಂದ ಆಚರಿಸಲಾಗುತ್ತಿದ್ದು, ಸಕಲ ಸದ್ಭಕ್ತರು ಈ ಪವಿತ್ರ ನಮಾರಂಭದಲ್ಲಿ ಪಾಲ್ಗೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯರ ದರ್ಶನ ಆಶೀರ್ವಾದ ಪಡೆದು ಮಹಾ ಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಕರ್ನಾಟಕ ಸರಕಾರ ತಾಲೂಕು ಆಡಳಿತ, ಬಸವಕಲ್ಯಾಣ, ಗವಿಮಠ ಟ್ರಸ್ಟ್‌ ಬಸವಕಲ್ಯಾಣ ಹಾಗೂ ಶ್ರೀ ಮದ್ವೀರಶೈವ ಸಧ್ಬೋಧನಾ ಸಂಸ್ಥೆ ತಾಲೂಕು ಘಟಕ ಬಸವಕಲ್ಯಾಣ ವತಿಯಿಂದ ಕೋರಿರುತ್ತಾರೆ.

ಭವ್ಯ ಮೆರವಣಿಗೆ

ದಿ: 12/03/2025 ಬುಧವಾರ ಬೆಳಿಗ್ಗೆ 09 ಗಂಟೆಗೆ ಬಸವಕಲ್ಯಾಣ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಬಿ.ಕೆ.ಡಿ.ಬಿ. ಗ್ರಂಥಾಲಯದವರೆಗೆ ತದನಂತರ ಧರ್ಮಸಭೆ ಜರುಗುವುದು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ