ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಒಳಮೀಸಲಾತಿ ಜಾರಿಗೊಳಿಸಲು ಅಂದಪ್ಪ ಮಾದರ ಆಗ್ರಹ

ಗದಗ: ಒಳಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಹಿಂಪಡೆದು ಒಳಮೀಸಲಾತಿ ಜಾರಿಗೊಳಿಸಿ ಸಾಮಾಜಿಕ‌ ನ್ಯಾಯ ಒದಗಿಸಿಕೊಡಬೇಕೆಂದು ರೋಣ ತಾಲೂಕು ದಲಿತ ಯುವ ಮುಖಂಡ ಅಂದಪ್ಪ ಎಂ.ಮಾದರ ಆಗ್ರಹಿಸಿದ್ದಾರೆ.
ಈ‌ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿ.ಎಂ. ಸಿದ್ದರಾಮಯ್ಯನವರ ಬಜೆಟ್ ಮಂಡನೆ ವೇಳೆ ಒಳಮೀಸಲಾತಿ ಹೋರಾಟಗಾರರು ಘೋಷಣೆ ಕೂಗಬಾರದಿತ್ತು ಕೂಗಿದ್ದು ತಪ್ಪೇ ಆದ್ರೆ ಏನ್ಮಾಡಣಾ ತಾಳ್ಮೆಯ ಕಟ್ಟೆ ಹೊಡೆದು ಹೋಗಿದೆ ಈ ವಿಷಯವಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಇನ್ನೂ ಎಷ್ಟು ವರ್ಷ ಅಂತಾ ಕಾಯೋಣ, ಯಾಕೆ ಮಾದಿಗರ ಮಕ್ಕಳ್ಯಾರು ಒಳಮೀಸಲಾತಿ ಪಡೆದು ಎಲ್ಲರಂತಾಗುವದು ನಿಮಗ್ಯಾರಿಗೂ ಇಷ್ಟವಿಲ್ಲವೇ ಎಂದರು.
ಕಳೆದ ಮೂರು ದಶಕಗಳಿಂದ ಮಾದಿಗರಿಗೆ ಒಳಮೀಸಲಾತಿ ಕೊಡ್ತೇವೆ, ಖಂಡೀತಾ ಕೊಡ್ತೇವೆ ಅಂತಾ ಮೂಗಿಗೆ ತುಪ್ಪಾ ಸವ್ರೀದ್ರೇ ಹೊರತು ಯಾರೂ ಕೊಡುತ್ತಿಲ್ಲ ಸಾಮಾಜಿಕ‌ ನ್ಯಾಯದ ಹರಿಕಾರ, ಅಹಿಂದ ನಾಯಕ ಅಂತಾ ಬಿರುದು ಪಡೆದ ಸಿದ್ದರಾಮಯ್ಯರವರಂತೂ ಈ ಬಗ್ಗೆ ಬಾಯ್ಬಿಚ್ಚಿ ಮಾತಾಡ್ತಿಲ್ಲ ಒಳ ಮೀಸಲಾತಿ ಕೊಡ್ತೀವಿ ಅಂತಾ ಎರಡು ಬಾರಿ ಅಧಿಕಾರ ಅನುಭವಿಸಿ ಮಾದಿಗ ಜನಾಂಗಕ್ಕೆ ಘೋರ ಅನ್ಯಾಯ ಮಾಡೀದ್ರು ಇನ್ನು ಕಾಂಗ್ರೆಸ್ ಸರ್ಕಾರದಲ್ಲಿರುವ ಮಾದಿಗ ಸಮಾಜದ ಸಚಿವರು ನಾಯಕರು ಹಲ್ಲು ಕಿತ್ತ ಹಾವಾಗಿದ್ದಾರೆ, ಅಧಿಕಾರದಾಸೆಗಾಗಿ ಸಮಾಜದ ಏಳ್ಗೆಯನ್ನೇ ಬಲಿ ಕೊಡ್ತಾಯಿದಾರೆ ಸಮಾಜ ಹಾಗೂ ಸಮಾಜದ ಮಕ್ಕಳ ಏಳ್ಗೆಗಾಗಿ ಧ್ವನಿ ಎತ್ತಿ ಇಲ್ಲದಿದ್ರೆ ಇಲ್ಲವೇ ಸಮಾಜದ ಹೆಸರೇಳಿಕೊಂಡು ಅಧಿಕಾರ ಅನುಭವಿಸಿರುವ ನಿಮಗೆ ಸಮಾಜವೇ ಒಂದು ದಿನಾ ಪಾಠ ಕಲಿಸಬೇಕಾಗುತ್ತದೆ.
ಮತ್ತೊಂದೆಡೆ ಅಂಬೇಡ್ಕರ್ ಅವರ ಆಶಯದಂತೆ ಬದುಕುತ್ತಿದ್ದೇವೆ ಅಂತಾ ಜಂಬ ಕೊಚ್ಚಿಕೊಳ್ಳುತ್ತಿರುವ ಸಹೋದರ ಸಮುದಾಯದ ಸಚಿವರು ನಾಯಕರು ಮಾದಿಗರನ್ನ ದಿನೇ ದಿನೇ ಶೋಷಣೆ ಮಾಡ್ತಿದ್ದಾರೆ. ಒಳ ಮೀಸಲಾತಿ ಜಾರಿಗೆ ವಿರೋಧಿಸುತ್ತಿರುವುದು ಅಂಬೇಡ್ಕರ್ ಆಶಯಗಳಿಗೆ ವಿರುದ್ದವಾಗಿರುವುದು. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಿ.
ಹೌದು ಅಷ್ಟಕ್ಕೂ ಒಳಮೀಸಲಾತಿ ಹೋರಾಟಗಾರರು ನನ್ನ ಸಹೋದರರು ಕೇಳಿದ್ದು ಸಾಮಾಜಿಕ‌ ನ್ಯಾಯದ ಹಕ್ಕನ್ನು ಯಾರದ್ದೋ ಮನೆಯ ಭಿಕ್ಷೆಯನ್ನಲ್ಲ. ಅಂತಹವರನ್ನ ಅಪರಾಧಿಗಳಂತೆ ಮಾರ್ಷಲ್ಸ್‌ಗಳು ಕರೆದುಕೊಂಡು ಹೋಗಿದ್ದು ಖಂಡನೀಯ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ