ಬಳ್ಳಾರಿ/ ಕಂಪ್ಲಿ : ಪಟ್ಟಣದ 12ನೇ ವಾರ್ಡಿನ ಶಿಕಾರಿ ಕಾಲೋನಿಯಲ್ಲಿ ಹಕ್ಕಿಪಿಕ್ಕಿ ಸಮುದಾಯದ ಯುವಕ ಯುವತಿಯರು ಒಟ್ಟುಗೂಡಿ ಬಣ್ಣ ಎರಚಿಕೊಂಡು ವೃತ್ತದಲ್ಲಿ ತಲ್ಲಿನರಾಗಿರುವುದು ಕಂಡುಬಂತು. ಬಣ್ಣ ನನ್ನ ಒಲವಿನ ಬಣ್ಣ ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ಎಂಬಂತೆ ಇಲ್ಲಿನ ಯುವತಿಯರು ಹೋಳಿ ಹುಣ್ಣಿಮೆಯ ಮರುದಿನವಾದ ಶನಿವಾರದಂದು ಮಧ್ಯಾಹ್ನ ಬಣ್ಣ ಹಚ್ಚಿಕೊಂಡು ತಮಟೆ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಣ್ಣದೋಳಿಯಲ್ಲಿ ಭಾಗವಹಿಸಿದ ನಂತರ ಕರ್ನಾಟಕ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ಎಚ್. ಪಿ. ಶಿಕಾರಿ ರಾಮು ಮಾತನಾಡಿ ಜನಪದ ನೃತ್ಯದ ಮೂಲಕ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೋಳಿ ಹಬ್ಬ ಆಚರಿಸಲಾಯಿತು. ಬೇದಭಾವ ಇಲ್ಲದೆ ಯುವಕ ಯುವತಿಯರು ಬಣ್ಣ ಹಚ್ಚಿಕೊಂಡು ಸಡಗರ ಸಂಭ್ರಮದಿಂದ ಆಚರಿಸಿದರು. ಯುಗಾದಿ, ದಸರಾ, ದೀಪಾವಳಿ, ಹೋಳಿ ಹಬ್ಬವನ್ನು ಸಂಪ್ರದಾಯದಂತೆ ಆಚರಣೆ ಮಾಡಿಕೊಂಡು ಬರಲಾಗಿದೆ ಹೋಳಿ ಹಬ್ಬವು ಪ್ರಾಚೀನ ಕಾಲದಿಂದಲೂ ಆಚರಿಸಲ್ಪಡುವ ಹಬ್ಬವಾಗಿದೆ ಎಂದರು. ಈ ವೇಳೆ ಜಿಲ್ಲಾ ಹಕ್ಕಿ ಪಿಕ್ಕಿ ಅಭಿವೃದ್ಧಿ ಸಂಘದ ಅಧ್ಯಕ್ಷ H.P. ಶ್ರೀಕಾಂತ್ ಹಕ್ಕಿಪಿಕ್ಕಿ ಬುಡಕಟ್ಟು ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷ ಜಯ ಬಾಬು ಯುವಕ ಸಂಘಟನೆ ಅಧ್ಯಕ್ಷ ಹರಿಕೃಷ್ಣ ಮುಖಂಡರಾದ ಲತಾ, ಮಹಾದೇವಿ, ಶಾರದಮ್ಮ, ಮೀನಾಕ್ಷಿ ,ಲಕ್ಷ್ಮಿ ,ರೇಣುಕಾ, ಗೋವಿಂದ ಹಾಗೂ ಗೋಪಿ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್