ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ಜರುಗಿದ 50 ನೇ ವರ್ಷದ ಶ್ರೀ ಶರಣ ಬಸವೇಶ್ವರ ಪುರಾಣ , ಸಾಮೂಹಿಕ ವಿವಾಹ ಹಾಗೂ ಮಹಾ ರಥೋತ್ಸವ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾನಗಲ್ ಶ್ರೀಗಳ 11 ದಿನದ ಪುರಾಣ ಕಾರ್ಯಕ್ರಮ ಜರುಗಿತು. ಜಾತ್ರಾ ದಿನದ ಅಂಗವಾಗಿ ಶರಣ ಬಸವೇಶ್ವರ ಮೂರ್ತಿಗೆ ಪೂಜಾ ಪುನಸ್ಕಾರ ಹಾಗೂ ಹೋಮ ಹವನಗಳನ್ನು ಅರ್ಚಕರಿಂದ ನೆರೆವೇರಿಸಲಾಯಿತು. ಬೆಳಗಿನ ಜಾವ ವಧು-ವರರನ್ನು ಕರೆತಂದು ಡಣಾಪೂರ ಗ್ರಾಮದ ತುಂಗಾಭದ್ರ ನದಿಗೆ ತೆರಳಿ ಕುಂಭಕಳಸಗಳಿಂದ ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಸಕಲ ವಾದ್ಯ ವೃಂದಗಳಿಂದ , ಡೊಳ್ಳು ,ವಿವಿಧ ಮೇಳಗಳಿಂದ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಸಕಲ ಭಕ್ತಾದಿಳೊಂದಿಗೆ ಧರ್ಮ ಸಭೆಯಲ್ಲಿ ಮೂರು ನವಜೋಡಿಗಳು ಸಾಮೂಹಿಕ ವಿವಾಹಿತರಾಗಿ ಶ್ರೀ ಶರಣ ಬಸವೇಶ್ವರ ಭಕ್ತಿಗೆ ಪಾತ್ರರಾದರು. ಬಳಿಕ ಶರಣ ಬಸವೇಶ್ವರ ಜಾತ್ರಮಹೋತ್ಸವಕ್ಕೆ ಆಗಮಿಸಿದ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರೆವೇರಿಸಲಾಯಿತು. ವಿಶೇಷವಾಗಿ ಅನ್ನಸಂತರ್ಪಣೆಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಭಕ್ತಾದಿಗಳಿಗೆ ನೀರನ್ನು ಲೋಟದಲ್ಲಿ ಸರಬರಾಜು ಮಾಡಿ ಪ್ಲಾಸ್ಟಿಕ್ ಮುಕ್ತ ಮಾಡಿದ್ದು ವಿಶೇಷ , ಗ್ರಾಮದ ಸಕಲರು ಭಾಗಿಯಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ವನ್ನು ನೆರೆವೇರಿಸಿದರು. ಸಂಜೆ ಶ್ರೀಶರಣ ಬಸವೇಶ್ವರ ಮಹಾರಥೋತ್ಸವಕ್ಕೆ ಹೆಬ್ಬಾಳ ಶ್ರೀಗಳು ಚಾಲನೆ ನೀಡಿದರು ಈ ವೇಳೆಯಲ್ಲಿ ತಿರುಪತ್ತೆಪ್ಪ ತಾತನವರು , ಹೆಬ್ಬಾಳ ಶ್ರೀಗಳು ,ಅಯೋಧ್ಯೆ ಹಾಲಮಠ ಗುರುಗಳು ಗ್ರಾಮದ ಹಿರಿಯರು ಭಾಗಿ ಇದ್ದು ಯಶಸ್ವಿಗೊಳಿಸಿದರು.

ವರದಿ ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ