ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರೋಗ್ಯಪೂರ್ಣ ಜೀವನಕ್ಕೆ ಫಿಸಿಯೋಥೆರಪಿ ಪೂರಕ – ಅಕ್ಷಯ ಹೆಗಡೆ

ಶಿರಸಿ: ಫಿಸಿಯೋಥೆರಪಿಯು ಒಂದು ನಿತ್ಯ ವಿನೂತನವಾದ ಚಿಕಿತ್ಸಾ ವಿಧಾನವಾಗಿದ್ದು, ಯಾವುದೇ ತೆರನಾದ ಔಷಧಿ, ಮಾತ್ರೆ, ಶಸ್ತ್ರ ಚಿಕಿತ್ಸೆಗಳಿಲ್ಲದೆ ನೋವನ್ನು ಉಪಶಮನಗೊಳಿಸಿ, ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಸುಗಮಗೊಳಿಸುತ್ತದೆ; ಅಬಾಲ ವೃದ್ಧರಾದಿಯಾಗಿ ಎಲ್ಲಾ ವರ್ಗದವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ; ನೋವಿನ ಅಥವಾ ಕಾಯಿಲೆಯ ಮೂಲ ಕಾರಣವನ್ನು ಪತ್ತೆ ಮಾಡಿ ಸೂಕ್ತವಾಗಿ ಪರಿಹರಿಸುವ ಮೂಲಕ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಬಹುದು.
ಇಂದು ನಮ್ಮಲ್ಲಿ ದೈಹಿಕ ವ್ಯಾಯಾಮಗಳ ಅಭಾವವೇ ಅನಾರೋಗ್ಯಕ್ಕೆ ಕಾರಣವಾಗಿದೆ; ನೋವು, ಅಶಕ್ತತೆ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಲು ಆಗದಿರುವುದು, ಕುಳಿತುಕೊಳ್ಳಲು, ನಿಲ್ಲಲು ಕಷ್ಟವಾಗುವುದು, ಭಾರವನ್ನು ಎತ್ತುವಾಗ, ಬಾಗಿ ಕೆಲಸ ಮಾಡಲಾಗದಿರುವುದು ಇವೆಲ್ಲವುಗಳನ್ನೂ ಫಿಸಿಯೋಥೆರಪಿಯ ಮೂಲಕ ತಡೆಗಟ್ಟಬಹುದು;
ನರಗಳಲ್ಲಿನ, ಕೈಕಾಲುಗಳಲ್ಲಿಯ ನೋವನ್ನು ಗುಣಪಡಿಸಿಕೊಳ್ಳಬಹುದಾಗಿದೆ; ಶರೀರವನ್ನು ಆರೋಗ್ಯವಂತವಾಗಿ ಮಾಡಿಕೊಳ್ಳಬಹುದಾಗಿದೆ ಎಂಬುದನ್ನು ಪ್ರೊಜೆಕ್ಟರ್ ಸಹಾಯದಿಂದ ಪ್ರಾಯೋಗಿಕವಾಗಿ ಹೇಗೆ ಮಾಡಬೇಕೆ0ಬುದನ್ನು ತೋರಿಸಿ, ವಿವರಣೆ ನೀಡಿ ತಿಳಿಸಿದರು.
ಬೆನ್ನು ನೋವು, ಮಂಡಿ ನೋವು, ಮರೆವುಗಳನ್ನು ಕೂಡಾ ಫಿಸಿಯೋಥೆರಪಿಯ ಮೂಲಕ ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ನೆಮ್ಮದಿಯ ಬದುಕಿಗಾಗಿ, ದೇಹದ ರಕ್ಷಣೆಗಾಗಿ, ಸ್ವಚ್ಛತೆ, ಆರೋಗ್ಯಕ್ಕೆ ಮಹತ್ವ ನೀಡಬೇಕು; ಅದಕ್ಕಾಗಿ ಒಂದಿಷ್ಟು ಶಿಸ್ತು, ನಿಯಮಿತ ವ್ಯಾಯಾಮ ಮಾಡಬೇಕು; ದೇಹವನ್ನು ದೇಗುಲದಂತೆ ಆರಾಧಿಸಿಬೇಕು ಹಾಗೂ ದೇಹ ಮನಸ್ಸುಗಳ ಸಮತೋಲನ ಅಗತ್ಯವೆಂದು ಅಕ್ಷಯ ಹೆಗಡೆ ಅವರು
ಗಾಯತ್ರಿ ಗೆಳೆಯರ ಬಳಗದವರ ಆಶ್ರಯದಲ್ಲಿ ಜರುಗಿದ ಆರೋಗ್ಯ ಐಶ್ವರ್ಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮನಮುಟ್ಟುವ ಉಪನ್ಯಾಸ ನೀಡಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಿ.ಎಸ್. ಹೆಗಡೆ, ಶಂಕರ್ ಹೆಗಡೆ, ರಾಧಾ ಹೆಗಡೆ, ಹುಲೇಕಲ್ ರಾಮ್ ಪೈ, ಇಂದಿರಾ ಬೈಲಕೇರಿ, ಆಶಾ ಹೆಗಡೆ ಮುಂತಾದವರು ಸಂದೇಹಗಳಿಗೆ ಪರಿಹಾರ ಕಂಡುಕೊಂಡರು.
ಪ್ರೊ.ಡಿ. ಎಂ ಭಟ್ಟ ಕುಳವೆ ಎಲ್ಲರನ್ನೂ ಸ್ವಾಗತಿಸಿ, ಉಪನ್ಯಾಸಕಾರರನ್ನು ಪರಿಚಯಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿ ಕಾರ್ಯಕ್ರಮ ನಿರೂಪಿಸಿದರು.
ಬಳಗದ ಮುಖ್ಯಸ್ಥ ಎಂ. ಎಸ್. ಹೆಗಡೆಯವರು ಎಲ್ಲರನ್ನೂ ವಂದಿಸಿ, ಉಪನ್ಯಾಸಕರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಸುಬ್ರಾಯ ಮತ್ತೀಹಳ್ಳಿ, ಕೃಷ್ಣ ವೇಣಿ ಹೆಗಡೆ, ತಾರಾ ಹೆಗಡೆ, ಎಲ್‌ ಜಿ ಭಟ್ಗದ್ದೆ, ಸುರೇಶ್ ಸಂಕೊಳ್ಳಿ, ಕಾಶಿನಾಥ ಹೆಗಡೆ, ಲತಾ ನೇತಲಕರ, ಭಾರತಿ ಹತ್ವಾರ, ಎನ್ ಆರ್ ವೈದ್ಯ, ಲಕ್ಷ್ಮಣ ಶಾನಭಾಗ, ಆರ್ ಎಸ್ ಬೈಲಕೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ