ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಡವನ ಕವಿತೆ

ಗುಡಿಸಲಿನ ಸೂರಿಂದ
ಬೆಳ್ಳಕ್ಕಿ ಇಣುಕಿತ್ತು
ಬಡತನದ ನೋವಿಂದ
ಕವಿತೆಯು ಮೂಡಿತ್ತು

ಬತ್ತಿದ ಕಣ್ಣೊಳಗೆ
ಕಂಬನಿಯು ಇಂಗಿತ್ತು
ಸದ್ದಡಗಿದ ಎದೆಯೊಳಗೆ
ಹೊಸ ಪಲ್ಲವಿ ಗುನುಗಿತ್ತು

ಪ್ರತೀ ನೋವಿನ ಇರಿತಕ್ಕೂ
ಪದ ನೆತ್ತರು ಹರಿದಿತ್ತು
ಮೌನದ ಮನ ಕೊರೆತಕ್ಕು
ಭಾವಗಳ ಅಲೆ ಮೊರೆದಿತ್ತು

ಆರೆ ಹೊಟ್ಟೆಯ ಬೆಂಕಿಯಲಿ
ಕವಿ ಚಿಟ್ಟೆಯು ಕುಣಿದಿತ್ತು
ಮೂದಲಿಕೆಗಳ ಕೊಂಕಿನಲಿ
ರಟ್ಟೆಯ ಛಲ ಮಣಿದಿತ್ತು

ಬಡತನದ ಬಿರುಮಳೆಗೆ
ಎದೆ ಗುಡಿಸಲು ಸೋರಿತ್ತು
ಸಿರಿತನದ ಕನಸೊಳಗೆ ಕವಿತೆ
ಹುಸಿನಗುವ ತೋರಿತ್ತು

ಜಗದ ನೋವಲ್ಲಿ
ಕವಿ ಮನಸು ಅಳುತಿತ್ತು
ಜಗದ ನಗುವಲ್ಲಿ
ತನ್ನ ನೋವ ಮರೆತಿತ್ತು

ವಿಷಜಂತು ಕ್ರಿಮಿಕೀಟ ಕಾಟದಲಿ
ಗುಡಿಸಲಿನ ಬದುಕು ಬಸವಳಿದಿತ್ತು
ಸುಖದ ಮಾಯೆಯ ಹುಡುಕಾಟದಲ್ಲಿ
ಪದಗಾರುಡಿಯ ಮೋಡಿ ಬರಸೆಳೆದಿತ್ತು

ಕವಿತೆಯ ಒಡಲಲ್ಲಿ ನೋವು ಅಡಗಿತ್ತು
ನೋವುಂಡ ಕವಿತೆ ಸೊಬಗ ಸೂಸಿತ್ತು
ಬಡತನದ ಸೊಬಗು ಸಿರಿತನವ ಕೆಣಕಿತ್ತು
ಕವಿಯ ಬಡತನವ ಜಗ ಕಾಣದಾಗಿತ್ತು

– ಮುಡಿಯಪ್ಪ ಹಣಮಂತ ಹುಡೇದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ