ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು ಆಚರಣೆ ಮಾಡುವ ಮೂಲಕ ಮುಕ್ತಾಯಗೊಂಡಿದೆ. ಈದ್ ಉಲ್-ಫಿತರ್ ದಿನದಂದು, ಬೆಳಗಿನ ಪ್ರಾರ್ಥನೆಯ ನಂತರ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಶುಭಾಶಯವನ್ನು ಕೋರಿ ಹಬ್ಬದ ಸ್ವಾಗತವನ್ನು ಆಚರಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಇದರ ಹೊರತಾಗಿ, ಸಿಹಿ ತಿನಿಸುಗಳನ್ನು ಸೇವಿಸುತ್ತಾರೆ. ಜನರು ಈದ್ ಪ್ರಾರ್ಥನೆಗಾಗಿ ಈದ್ ದಿನದಂದು ಜನರು ಹೊಸ ಬಟ್ಟೆಗಳನ್ನು ಧರಿಸಿ ಸಿಹಿತಿಂಡಿಗಳನ್ನು ವಿತರಿಸುತ್ತಾರೆ. ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ನಾಳೆ ಈದ್ಗಾಗಳಲ್ಲಿ ಮುಸ್ಲಿಮರು ಸಾಮೂಹಿಕ ಹಬ್ಬದ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
