ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಳ್ಳೊಳ್ಳಿ: ಸಿದ್ದಲಿಂಗೇಶ್ವರ 9ನೇ ರಥೋತ್ಸವ ಸಂಭ್ರಮ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಸಾವಿರದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9ನೇ ಜಾತ್ರಾ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ 7.30ಕ್ಕೆ ಅಪಾರ ಭಕ್ತರ ಮಧ್ಯೆ ಸಂಭ್ರಮ ಸಡಗರದಿಂದ ರಥೋತ್ಸವ ಜರುಗಿತು.
ತಳಿರು ತೋರಣ ಹಾಗೂ ಹೂವುಗಳಿಂದ ಅಲಂಕೃತಗೊಂಡಿದ್ದ ರಥಕ್ಕೆ ಸಾವಿರ ದೇವರ ಸಂಸ್ಥಾನ ಮಠದ ಸಂಗಮನಾಥ ಸ್ವಾಮಿ ಪೂಜೆ ಸಲ್ಲಿಸಿ ನಂತರ ಅಪಾರ ಭಕ್ತರ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ತರಾಭಿಮುಖವಾಗಿ ಚಲಿಸಿದ ರಥವು ಯಲ್ಲಮ್ಮ ದೇವಸ್ಥಾನದ ಪಾದಗಟ್ಟೆವರೆಗೆ ತಲುಪಿ ಮರಳಿ ಬಂದಿತು.
ಇದಕ್ಕೂ ಮೊದಲು ಸಂಜೆ 5 ಗಂಟೆಗೆ ಗ್ರಾಮದ ಹಳೆಯ ಮಠದಿಂದ ವಾದ್ಯಗಳ ಸಮೇತ ಕುಂಭ ಮತ್ತು ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು.
ರಥೋತ್ಸವದಲ್ಲಿ ಕಂಬಳೇಶ್ವರ ಮಠದ ಶ್ರೀ‌‌ ಸೋಮಶೇಖರ ಶಿವಾಚಾರ್ಯ, ಹಲಕರ್ಟಿ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯ, ಬೆನಕನಹಳ್ಳಿ ವಿರಕ್ತಮಠದ ಕೇದಾರಲಿಂಗ ಸ್ವಾಮಿ, ದಂಡಗುಂಡದ ಸಂಗನಬಸವ ಶಿವಾಚಾರ್ಯ, ಶಾಂತಣ್ಣ ಚಾಳಿಕಾರ, ರಾಜುಗೌಡ ಮಾಲಿಪಾಟೀಲ, ಸೋಮಶೇಖರಗೌಡ ಮುಸೇನಿ, ವೀರಾರೆಡ್ಡಿ ಮುಸೇನಿ, ಮಹದೇವಪ್ಪ ಡೋಣಗಾಂವ, ರವಿಕುಮಾರ ಪಡ್ಲಾ, ಶ್ರೀಶೈಲ ಗುತ್ತೇದಾರ, ಶಿವಣ್ಣ ಹೂಗಾರ, ದೇವಿಂದ್ರಪ್ಪ ಹಾದಿಮನಿ, ಶಾಂತಕುಮಾರ ಎಣ್ಣಿ, ಈರಣ್ಣ ಮಲ್ಕಂಡಿ, ರಾಜಶೇಖರ ಡೋಣಗಾಂವ, ಮಂಜುಗೌಡ, ಮರೆಪ್ಪ ದಂಡಗುಂಡ ಮಹೇಂದ್ರಗೌಡ ಗುತ್ತೇದಾರ ಯಾದಗಿರಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಇದ್ದರು.
ರಥೋತ್ಸವ ಹಿನ್ನೆಲೆ ಚಿತ್ತಾಪುರ ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸಂಸ್ಥಾನ ಮಠದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯರಾದ ಸಂಗಣ್ಣಗೌಡ ಅನ್ವರ ರಥಕ್ಕೆ ಹೂವಿನ ಅಲಂಕಾರ ಸೇವೆ ಮಾಡಿದ್ದರು.

ವರದಿ ಮೊಹಮ್ಮದ್ ಅಲಿ, ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ