ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಮಾದಿಗ’ ಎಂದು ನಮೂದಿಸಲು‌ ಮನವಿ

ಕಲಬುರಗಿ: ಜಾತಿಗಣತಿ ವೇಳೆ ಮಾದಿಗ ಜನಾಂಗದ ಎಲ್ಲರೂ ಮಾದಿಗ ಎಂದೇ ಜಾತಿ ಹೆಸರನ್ನು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಸಿ ಕಟ್ಟಿಮನಿ ಅವರು ಮಾದಿಗ ಸಮಾಜದ ಕುಲಬಾಂದವರಲ್ಲಿ ಮನವಿ ಮಾಡಿಕೊಂಡರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಜಾತಿಗಣತಿಯಿಂದ ಯಾವುದೋ ಒಂದು ಜಾತಿಗೆ ಅನುಕೂಲವಾಗುವುದಿಲ್ಲ. ಎಲ್ಲರೂ ಅವರವರ ಜಾತಿಯನ್ನು ನಮೂದಿಸಿದರೆ ಅವರವರ ಜಾತಿಗೇ ಅನುಕೂಲವಾಗುತ್ತದೆ. ಹಾಗೆಯೇ, ಮಾದಿಗರು ಸಹ ಮಾದಿಗ ಜಾತಿ ಎಂದು ಬರೆಸಬೇಕು. ಉಪಜಾತಿಗಳನ್ನು ಬರೆಸುತ್ತಾ ಹೋದರೆ ಸಮಾಜಕ್ಕೆ ಅನುಕೂಲವಾಗಲಿದೆ.
ಇದಕ್ಕಾಗಿ ಜನಾಂಗದ ಮುಖಂಡರು ಪ್ರತಿ ಗ್ರಾಮದಲ್ಲೂ ನಿಗಾವಹಿಸಿ ಕರಪತ್ರ ಹಂಚಿಕೆ ಮೊದಲಾದ ಮಾರ್ಗಗಳ ಮೂಲಕ ಜನಾಂಗದ ವಿಧ್ಯಾವಂತರು,ಯುವಕರು, ಮುಖಂಡರು,ಪ್ರತಿ ಗ್ರಾಮದಲ್ಲಿ ಕರಪತ್ರ ಹಂಚಿಕೆ ಮೊದಲಾದ ಮಾರ್ಗದ ಮೂಲಕ ಜನಾಂಗದವರನ್ನು ಜಾಗೃತಿಗೊಳಿಸಬೇಕಾಗಿದೆ.

ಎಲ್ಲರೊಂದಿಗೆ ಸಹಬಾಳ್ವೆ:
ಸಮಾಜದಲ್ಲಿ ಎಲ್ಲಾ ಜನಾಂಗದವರೊಂದಿಗೂ ಸಹಬಾಳ್ವೆ ನಡೆಸಬೇಕಾಗಿದೆ. ವಿದ್ಯೆ, ಸನ್ನಡತೆಯ ಮೂಲಕ ಎಲ್ಲರ ಮನಗೆಲ್ಲಬೇಕು. ವೃಥಾ ಜಾತಿ ನಿಂದನೆ ಮೊದಲಾದ ಪ್ರಕರಣಗಳನ್ನು ದಾಖಲಿಸುವುದನ್ನು ಬಿಟ್ಟು ವಿಶ್ವಾಸಗಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಎಲ್ಲಾ ಜನಾಂಗದವರಲ್ಲೂ ಬಡವರು,ದಲಿತರು ಇದ್ದಾರೆ. ಅವರವರ ಜಾತಿಯ ಜತೆಗೆ ಅವರ ಆರ್ಥಿಕ ಸ್ಥಿತಿಯನ್ನು ನಮೂದಿಸಿದರೆ ಭವಿಷ್ಯದಲ್ಲಿ ಸರ್ಕಾರವು ಅಂತಹ ಜಾತಿಯಲ್ಲಿರುವ ಬಡವರಿಗಾಗಿ ಯೋಜನೆಗಳನ್ನು ರೂಪಿಸಲಿದೆ. ಇದರಿಂದ ಮುಂದಿನ ಪೀಳಿಗೆಗೆ ಪ್ರಯೋಜನವಾಗಲಿದೆ ಎಂದು ಅವರು ಜಾತಿಗಣತಿಯ ಅನುಕೂಲಗಳನ್ನು ಕುರಿತು ವಿವರಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ