ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೆಸಿಬಿ ಗಳ ಘರ್ಜನೆಗೆ ಕಟ್ಟಡಗಳು ಪುಡಿಪುಡಿ : ಮನೆ, ಅಂಗಡಿ ಕಟ್ಟಡಗಳ ತೆರವು

ಬಳ್ಳಾರಿ/ಕಂಪ್ಲಿ : ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆಯವರೆಗಿನ ರಸ್ತೆಯನ್ನು ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತವತಿಯಿಂದ ಮನೆ ಹಾಗೂ ಅಂಗಡಿ ಅಪಾಯಕಾರಿ, ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಮೂರು ಜೆ.ಸಿ.ಬಿಯಿಂದ ತೆರವುಗೊಳಿಸಿದರು. ಮಸೀದಿಯಿಂದ ಜೋಗಿ ಕಾಲುವೆವರೆಗೂ ರಸ್ತೆ ಅತ್ಯಂತ ಕಿರಿದಾಗಿದ್ದು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆಯಾಗಿದ್ದರಿಂದ ಪುರಸಭೆ ಸಾಮಾನ್ಯ ಸಭೆಯಲ್ಲಿ ತಿರ್ಮಾನವಾಗಿತು, ಶಾಸಕ ಜೆ.ಎನ್‌. ಗಣೇಶ ರವರು ಸ್ಥಳೀಯ ಮುಖಂಡರ ಹಾಗೂ ಸಾರ್ವಜನಿಕರ ಸಭೆ ಮಾಡಿದ್ದರು. ನಿವಾಸಿಗಳು ಒಟ್ಟು 35 ಅಡಿಗೆ ಅಗಲೀಕರಣಕ್ಕೆ ಎಲ್ಲರ ಸಮಕ್ಷಮದಲ್ಲಿ ತೀರ್ಮಾನವಾಗಿತ್ತು. ನಿವಾಸಿಗಳು ಎಡಕ್ಕೆ 17.5 ಬಲಕ್ಕೆ 17.5 ಅಡಿಗಳಿಗೆ ತೆರವುಗೊಳಿಸಲಿಕ್ಕೆ ಸಾರ್ವಜನಿಕರು ಮತ್ತು ಮುಖಂಡರು ಒಪ್ಪಿದ್ದರು. ಆದರೆ ಇವತ್ತಿನವರೆಗೂ ನಿವಾಸಿಗಳು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿಲ್ಲ ಆದ್ದರಿಂದ ನಿವಾಸಿಗಳಿಗೆ ನೋಟಿಸ್ ನೀಡಿ ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತ 60 ಮನೆ ಮನೆಗಳು ಸೇರಿದಂತೆ ಅಂಗಡಿಗಳ ಕಟ್ಟಡ ತೆರವುಗೊಳಿಸಿತು. ಕೆಲವೊಂದು ಮನೆಯವರು ಅಡ್ಡಗಟ್ಟಿದರು. ಮನೆಯನ್ನು ಕಳೆದುಕೊಂಡು ಸ್ಥಳೀಯ ನಿವಾಸಿಗಳ ದುಃಖಿಸುವ ಸ್ಥಿತಿ ಎಲ್ಲರ ಮನ ಕರಗುವಂತೆ ಮಾಡಿತು. ಆದರೂ ಸಹ ಪುರಸಭೆ ಆಡಳಿತ ತೆರವುಗೊಳಿಸಿದರು. 27 ಮನೆಯ ನಿವಾಸಿಗಳು ಕೋರ್ಟಿಗೆ ಹೋಗಿದ್ದಾರೆ. ನಿವಾಸಿಗಳ ಪರ ವಕೀಲರಾದ ಕೊಪ್ಪಳದ ಮಂಜುನಾಥ ಮಸ್ಕಿ ಮಾತನಾಡಿ ಇನ್ನೂ ನಿವಾಸಿಗಳ ದಾವೆ ಕೋರ್ಟಿನಲ್ಲಿ ಇದ್ದು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಆದರೆ ಏಕಾಏಕಿ ಪುರಸಭೆಯವರು ತೆರವುಗೊಳಿಸುತ್ತಿರುವುದು ನಮ್ಮ ಕಕ್ಷೀದಾರಿಗೆ ಮಾಡಿದ ಅನ್ಯಾಯ ಎಂದು ತಿಳಿಸಿದರು. ನಡವಲ ಮಸೀದಿಯಿಂದ ಜೋಗಿ ಕಾಲುವೆಯವರೆಗೂ ತೆರವುಗೊಳಿಸಲಾಯಿತು. ನಿವಾಸಿಗಳಿಗೆ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ ಹೇಳಿದರು. ಪೋಲಿಸರ ಭಾರೀ ಬಿಗಿ ಭದ್ರತೆಯನ್ನು ಏರ್ಪಡಿಸಿದರು. ಕೆ ಇ.ಬಿ. ಹಾಗೂ ಪಿ.ಡಬ್ಲ್ಯೂ .ಡಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಸಹಕಾರದಿಂದ ತೆರವುಗೊಳಿಸಲಾಯಿತು. ಸಿ.ಪಿ.ಐ ಕೆ. ಬಿ. ವಾಸುಕುಮಾರ, ಪುರಸಭೆ ಜೆ ಇ.ಮೇಘನ ಮ್ಯಾನೇಜರ್ ಶರಣಪ್ಪ ಸೇರಿದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ