

ಮಂಡ್ಯ : ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಕೃಷ್ಣರಾಜಪೇಟೆಯಲ್ಲಿ ಕೆಲವು ಶೋರೂಮ್, ಬಾರ್ ಅಂಗಡಿ, ಹೋಟೆಲ್, ಶಾಲೆಗಳಲ್ಲಿ ಕನ್ನಡ ನಾಮಫಲಕವಿಲ್ಲದೆ ಬರೀ ಇಂಗ್ಲಿಷ್ ನಲ್ಲಿ ಇರುವುದರಿಂದ ಕರ್ನಾಟಕ ಯುವ ರಕ್ಷಣಾ ವೇದಿಯ ತಾಲ್ಲೂಕು ಅಧ್ಯಕ್ಷ ಜಾವಿದ್ ಹಾಗೂ ಪದಾಧಿಕಾರಿಗಳು ತೆರಳಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಸರ್ಕಾರದ ಆದೇಶದಂತೆ 60 ಪರ್ಸೆಂಟ್ ಕನ್ನಡ ನಾಮಫಲಕ ಅಳವಡಿಸಬೇಕೆಂದು ಬಾರ್ ಅಂಗಡಿ, ಶೋರೂಮ್, ಹೋಟೆಲ್, ಶಾಲೆಯ ಮಾಲೀಕರಿಗೆ ತಿಳುವಳಿಕೆ ಹೇಳಿದರು.

ಒಂದು ವೇಳೆ ಕನ್ನಡ ನಾಮಫಲಕ ಹಾಕದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮಗಳ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ನಿಸಾರ್, ತಾ, ಮಹಿಳಾ ಉಪಾಧ್ಯಕ್ಷೆ ಲೀಲಾವತಿ, ಪುರುಷೋತ್ತಮ್, ದೇವಿರಮ್ಮ, ಉಪಸ್ಥಿತರಿದ್ದರು.
- ಕರುನಾಡ ಕಂದ
