ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೇ.1ರಂದು ಬಿಎಸ್ ವಿ ಶಾಲೆ ತೆರವಿಗೆ ತೀರ್ಮಾನ : ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿಗೆ ಸದಸ್ಯರ ಒಮ್ಮತ

ಬಳ್ಳಾರಿ / ಕಂಪ್ಲಿ : ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು.
ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪುರಸಭೆಗೆ ಒಳಪಡುವ ಬಿಎಸ್ವಿ ಶಾಲೆಯನ್ನು ಶಾಲಾ ಆಡಳಿತ ಮಂಡಿಳಿಯವರು ತೆರವು ಮಾಡಬೇಕು. ಇಲ್ಲವಾದಲ್ಲಿ ಮೇ.1ರಂದು ಪುರಸಭೆಯಿಂದ ಸಂಪೂರ್ಣವಾಗಿ ತೆರವುಗೊಳಿಸಲು ಇಲ್ಲಿನ ಸಾಮಾನ್ಯ ಸಭೆಯ ಸರ್ವ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು ಹಾಗೂ ಕಂಪ್ಲಿ ಪುರಸಭೆಯ 2025-26ನೇ ಸಾಲಿನ ಎಸ್. ಎಫ್. ಸಿ. ಬಂಡವಾಳ ಸೃಜನೆ, ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಯೋಜನೆಯ ಕ್ರಿಯಾ ಯೋಜನೆ, 15 ನೇ ಹಣಕಾಸು ಆಯೋಗದ ನಿರ್ಬಂಧಿತ ಹಾಗೂ ಮುಕ್ತನಿಧಿ ಅನುದಾನ ಯೋಜನೆಯ ಕ್ರಿಯಾ ಯೋಜನೆ ಮತ್ತು ಪುರಸಭೆ ನಿಧಿ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ., ಶೇ. 7.25 , ಶೇ. 5 ರ ಯೋಜನೆಯ ಕ್ರಿಯಾ ಯೋಜನೆ ತಯಾರಿಸಿ, ಅನುಮೋದನೆ ಪಡೆಯಲಾಯಿತು. ನಂತರ ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ, ಒಪ್ಪಿಗೆ ಪಡೆಯಲಾಯಿತು.
ನಂತರ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪುರಸಭೆಗೆ ಒಳಪಡುವ ಕಟ್ಟಡದ ಸ್ಥಳವನ್ನು ಬಿಎಸ್‌ವಿ ಶಾಲೆ ನಡೆಸಲು ಹಿಂದಿನವರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಹಲವು ವರ್ಷಗಳಿಂದ ಬಿಎಸ್‌ವಿ ಶಾಲೆಯಿಂದ ಪುರಸಭೆಗೆ ಯಾವುದೇ ಆದಾಯ ಬಂದಿಲ್ಲ. ಇಲ್ಲಿನ ಸ್ಥಳವನ್ನು ಬಿಡುವಂತೆ ಹಲವು ವರ್ಷಗಳಿಂದ ಶಾಲಾ ಆಡಳಿತ ಮಂಡಳಿಯವರಿಗೆ ತಿಳಿಸುತ್ತಾ ಬಂದರೂ, ಕುಂಟು ನೆಪ ಹೇಳಿಕೊಂಡು, ಪುರಸಭೆ ಜಾಗವನ್ನು ಬಿಟ್ಟಿಕೊಡದೇ, ಉದ್ದಟತನ ತೋರುತ್ತಿದ್ದಾರೆ. ಆದರೆ, ಈ ಸಲ ಯಾವುದೇ ಕಾರಣಕ್ಕೂ ಪುರಸಭೆ ಸ್ಥಳದಲ್ಲಿ ಶಾಲೆ ನಡೆಸಲು ಬಿಡುವುದಿಲ್ಲ. ಮತ್ತು ಐದು ದಿನದೊಳಗಾಗಿ ಆಡಳಿತ ಮಂಡಳಿಯವರು ತೆರವು ಮಾಡಬೇಕು. ಇಲ್ಲವಾದಲ್ಲಿ ಮೇ.1ರಂದು ಖುದ್ದಾಗಿ ಶಾಲೆಯನ್ನು ತೆರವುಗೊಳಿಸಲಾಗುವುದು. ಮುಂದಿನ ದಿನದಲ್ಲಿ ನಗರಸಭೆಯಾಗಲಿದ್ದು, ಜಾಗದ ಅವಶ್ಯಕತೆ ಇದ್ದು, ಮತ್ತು ಅಭಿವೃದ್ಧಿ ದೃಷ್ಠಿಯಿಂದ ಪುರಸಭೆಗೆ ಒಳಪಡುವ ಜಾಗವನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಡಾ.ವಿ.ಎಲ್.ಬಾಬು, ಕೆ.ಎಸ್.ಚಾಂದಬಾಷಾ, ರಾಮಾಂಜನೇಯ, ಎಸ್.ಎಂ.ನಾಗರಾಜ, ಟಿ.ವಿ.ಸುದರ್ಶನರೆಡ್ಡಿ, ಲೊಡ್ಡು ಹೊನ್ನೂರವಲಿ, ರಮೇಶ ಹೂಗಾರ, ವೀರಾಂಜಿನಿ ಸೇರಿದಂತೆ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ