ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಪಹಲ್ಗಾಮ್ ಹತ್ಯೆಗೆ ತೀವ್ರ ಖಂಡನೆ’ , ಮಡಿದವರಿಗೆ ಶ್ರದ್ಧಾಂಜಲಿ “

ವಿಜಯನಗರ / ಕೂಡ್ಲಿಗಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಜರುಗಿದ ಹತ್ಯೆಯನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ, ತೀವ್ರವಾಗಿ ಖಂಡಿಸಿದೆ. ಮತ್ತು ಹತ್ಯೆಯಲ್ಲಿ ಅಗಲಿದವರಿಗೆ, ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ಏ. 24 ರಂದು ಸಂಜೆ ಪಟ್ಟಣದ ಮದಕರಿ ವೃತ್ತದಲ್ಲಿ, ಸಂಘ ಪರಿವಾರದವರು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಮೇಣದಬತ್ತಿ ಹಚ್ಚಿ ಕ್ಷಣ ಹೊತ್ತು ಮೌನಾಚರಣೆ ಮಾಡೋ ಮೂಲಕ, ಮಡಿದವರ ಅಗಲಿಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಹಾಗೂ ಭಜರಂಗದಳದ ಮುಖಂಡರು ಮಾತನಾಡಿ ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿದರು, ಭಯೋತ್ಪಾದನೆಯನ್ನು ಸಂಪೂರ್ಣ ನಿರ್ನಾಮ ಮಾಡಬೇಕು ಮತ್ತು ದೇಶ ದ್ರೋಹಿ ಜಿಹಾದಿಗಳನ್ನು ದೇಶದಿಂದ ತೊಲಗಿಸಬೇಕು, ಘಟನೆಗೆ ಕಾರಣವಾದ ಉಗ್ರರನ್ನು ಶೀಘ್ರವೇ ಹತ್ಯೆಗೈಯ್ಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಮುಖಂಡರಾದ ಅನಂತ ಪದ್ಮನಾಭ ಶೆಟ್ರು, ಬಂಡ್ರಿ ವಿಜಯಕುಮಾರ ಶೆಟ್ರು, ರಾಮು ಕಾಟ್ವಾ, ಬಳಿಗೇರ ಬಸವರ‍ಾಜಪ್ಪ, ತಾಳಸ ತಿಪ್ಪೇಸ್ವಾಮಿ, ಜಿ.ಬಿ.ದುರುಗೇಶ, ಸ್ವಾಮಿ ವಿವೇಕ‍ಾನಂದ, ತೂಗದಲಿ ರಾಘವೇಂದ್ರ, ಸಂತೋಷ ಮಿಸ್ಕಿನ್, ವೆಂಕಟೇಶ, ವಕೀಲರಾದ ಬಣಕಾರ ಶಿವಕುಮಾರ, ಭೀಮಪ್ಪ , ಸಂತೋಷ ಪಾಟೀಲ, ಜಿ.ಸಿದ್ದಪ್ಪ, ಗುರುರಾಜ , ಸತೀಶ ಕುಮಾರ, ಕಂಬಾರ ಹೊನ್ನೂರಪ್ಪ ಸೇರಿದಂತೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕೂಡ್ಲಿಗಿ ಶಾಖೆಯ ನೂರಾರು ಕಾರ್ಯಕರ್ತರು ಹಾಗೂ ಸಂಘ ಪರಿವಾರದವರು ಭಾಗಿಯಾಗಿದ್ದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ