ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುರಾತನ ಶಿಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ – ವೆಂಕಟೇಶ್ ಮುಧಿರಾಜ್

ಯಾದಗಿರಿ/ ಗುರುಮಠಕಲ್: ಪಟ್ಟಣದ ಕಾಕಲವಾರ ರಸ್ತೆಯ ಪಕ್ಕದ ಬದಿಯಲ್ಲಿರುವ ಗುಡ್ಡದ ದೇವರು/ ಗ್ರಾಮ ರಕ್ಷಕ ಎಂದು ಕರೆಯಲ್ಪಡುವ ಪುರಾತನ ವಿಗ್ರಹದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಹಿಂದೂ ಯುವ ಘರ್ಜನೆ ಸಮಿತಿ ಗುರುಮಠಕಲ್ ಯುವಕರ ಪಡೆ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಪುರಾತನ ಶಿಲೆಗಳ ರಕ್ಷಣೆಗೆ ಮುಂದಾಗಿದ್ದಾರೆ.
ಶಿಲೆಯ ಇತಿಹಾಸದ ಕುರಿತು ಲಿಖಿತವಾಗಿ ಯಾವುದೇ ಪುರಾವೆಗಳಿಲ್ಲ.. ಒಂದು ಅಂದಾಜಿನ ಪ್ರಕಾರ ಸರಿ ಸುಮಾರು 500-600 ವರ್ಷಗಳ ಹಳೆಯದು ಎನ್ನಬಹುದು.
ಗ್ರಾಮದ ಹಿರಿಯರ ಪ್ರಕಾರ ನವ ವಧುವನ್ನು ಮನೆಗೆ ಸ್ವಾಗತಿಸುವ ಮುನ್ನ ಗುಡ್ಡದ ದೇವರಿಗೆ ಪೂಜೆ ಸಲ್ಲಿಸುವುದು, ಯಾವುದೇ ಭೂತ ಪ್ರೇತಗಳ ಪೀಡೆ ಆಗದಂತೆ ಹಾಗೂ ಮದುವೆ ಶುಭ ಕಾರ್ಯಗಳ ಸಂದರ್ಭದಲ್ಲಿ ನವ ವಧು ವರರ ವಸ್ತ್ರಗಳನ್ನು ದೇವರಿಗೆ ಅರ್ಪಿಸಿ, ಮದುವೆಯಲ್ಲಿ ಧರಿಸುವುದರಿಂದ ದಾಂಪತ್ಯ ಜೀವನ ಸುಖಕರವಾಗಿ ಸಾಗುವುದು ಎಂಬ ನಂಬಿಕೆ ಈಗಲೂ ಇದೆ.
ಪುರಾತನ ಶಿಲೆಯ ಸುತ್ತಮುತ್ತ ಮಾಂಸದ ಅಂಗಡಿಗಳು ಇದ್ದು, ಅವುಗಳ ತ್ಯಾಜ್ಯ ಶಿಲೆಯ ಸುತ್ತಮುತ್ತ ಹಾಕುತ್ತಿದ್ದು, ಬೇಸರ ತಂದಿದೆ
ಪುರಸಭೆ ಕಾರ್ಯಾಲಯಕ್ಕೆ ಸಾಕಷ್ಟು ಬಾರಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ವತಿಯಿಂದ ರಸ್ತೆಯುದ್ದಕ್ಕೂ ಇರುವ ಮಾಂಸದಂಗಡಿಗಳ ತೆರವಿಗೆ ಸಾಕಷ್ಟು ಬಾರಿ ಮನವಿ ಕೊಟ್ಟಿದ್ದರೂ ಸಹ ಇನ್ನೂ ಮಾಂಸದ ಅಂಗಡಿಗಳ ಸ್ಥಳಾಂತರಕ್ಕೆ ಇನ್ನೂ ಪುರಸಭೆ ಅಧಿಕಾರಿಗಳು ಮುಂದಾಗದೇ ಇರುವದು ಅವರ ಬೇಜವಾಬ್ದಾರಿತನ ತೋರಿಸಿಕೊಡುತ್ತದೆ ಎಂದು ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ನರಸಪ್ಪ ಗಂಗಾನೊಳ, ಬಾಲಾಜಿ, ಸುತ್ತಮುತ್ತಲಿನ ವರ್ತಕರು, ಹಿಂದೂ ಯುವ ಘರ್ಜನೆ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ