ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೆ.ಜೆ.ಎಂ. ಕಳಪೆ ಕಾಮಗಾರಿ ಅಪೂರ್ಣಗೊಳ್ಳದ ಕಾಮಗಾರಿ ಗ್ರಾ.ಪಂ.ಗೆ ಹಸ್ತಾಂತರ

ತನಿಖೆ ನಡೆಸಿ ಭ್ರಷ್ಟ ಪಿ.ಡಿ.ಓ ಅಮಾನತು ಮಾಡುವಂತೆ ಶರಣಬಸಪ್ಪ ಎಲ್ಹೇರಿ ಆಗ್ರಹ

ಗುರುಮಠಕಲ್‌/ ಯಲ್ಹೇರಿ: ತಾಲ್ಲೂಕಿನ ಯಲ್ಲೇರಿ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆ ಪ್ರಮಾಣದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳದೇ ಪಿಡಿಓ ರವರು ಈ ಕಾಮಗಾರಿಯನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿಕೊಂಡಿದ್ದು, ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಶರಣಬಸಪ್ಪ ಎಲ್ಹೇರಿ ಕರವೇ ತಾಲೂಕು ಘಟಕದ ಅಧ್ಯಕ್ಷರು ಇಂದು ತಾ.ಪಂ. ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಅಂಬರೀಷ ಪಾಟೀಲರವರಿಗೆ ದೂರು ಸಲ್ಲಿಸಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಯಲ್ಲೇರಿ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ನಡೆದಿರುವ ಕಾಮಗಾರಿ ಅಂದಾಜು ಪತ್ರಿಕೆ ಪ್ರಕಾರ ಮಾಡದೇ, ಬೇಕಾಬಿಟ್ಟಿ ಕಾಮಗಾರಿ ಮಾಡಿದ್ದು, ಯಲ್ಲೇರಿ ಗ್ರಾಮದ 1162 ಮನೆಗಳಿಗೆ ನಳಗಳ ಸಂಪರ್ಕ ಕಲ್ಪಿಸುವ ಕಾಮಗಾರಿ ಅಂದಾಜು ಮೊತ್ತ 174.30 ಲಕ್ಷ, ಕರಾರು ಮೊತ್ತ ರೂ. 170.22 ಲಕ್ಷ ಇದ್ದು, ಕಾಮಗಾರಿ ಪ್ರಾರಂಭವಾಗಿ ಸುಮಾರು 4 ವರ್ಷಗಳ ಕಾಲ ಕಳೆದರೂ, ಪ್ರಗತಿಯಲ್ಲಿದೆ ಎಂದು ತೋರಿಕೆಗೆ ತೋರಿಸಿ. ಕಾಮಗಾರಿ ಪ್ರಗತಿ ಹಂತದಲ್ಲಿರುವಾಗಲೇ ತರಾತುರಿಯಲ್ಲಿ ಗ್ರಾ. ಪಂ ಸದಸ್ಯರ ಸಭೆ ಕರೆಯದೆ ಅವರ ಗಮನಕ್ಕೂ ತರದೆ ಹಸ್ತಾಂತರ ಮಾಡಿಕೊಂಡಿರುತ್ತಾರೆ.

ಯಲ್ಹೇರಿ ಗ್ರಾಪಂ ಅಧಿಕಾರಿಗಳಾದ ಶೋಭಾ ಪಾಟೀಲ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಹಾಗಾಗಿ ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.

ಪ್ರಸ್ತುತ ಕಾಮಗಾರಿ ಕಳಪೆ ಹಂತದಲ್ಲಿದ್ದು,ತನಿಖಾ ತಂಡದವರು ಕೂಡಾ ಸುಳ್ಳು ವರದಿ ನೀಡಿದ್ದಾರೆ. ಕಾಮಗಾರಿಯ ತನಿಖೆ ನಡೆಸಿ ಮತ್ತು ಪಿಡಿಓ ರವರು ಗುತ್ತಿಗೆದಾರರ ಜೊತೆ ಸೇರಿ ಹಣವನ್ನು ಲೂಟಿ ಮಾಡಿರುತ್ತಾರೆಂದು ಅನುಮಾನವಿದೆ.
ಸಂಪೂರ್ಣ ತನಿಖೆ ಮಾಡಿ, ತನಿಖಾ ತಂಡವನ್ನು ರೂಪಿಸಿ 1162 ಮನೆಗಳ ನಳಗಳ ವೀಕ್ಷಣೆ ಮಾಡಿ ಭ್ರಷ್ಟ ಪಿ. ಡಿ. ಓ ಮತ್ತು ಗುತ್ತೆಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ತಾಲೂಕು ಪದಾಧಿಕಾರಿಗಳಾದ ಕಾಶಿನಾಥ್ ಚಂಡರಿಕಿ, ಚೆನ್ನಪ್ಪ ಕಾಕಲವರ್, ಸಾಯ್ಬಣ್ಣ ಸಿದ್ದಾಪುರ, ಭೀಮು ಬೂದೂರ್, ನರಸಿಂಹ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ