ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಧನ ವಾರ್ತೆ

ಬಳ್ಳಾರಿ / ಕಂಪ್ಲಿ : ಬಿ. ಮೋಹನ್ ಬಾಬು ಇನ್ನು ನೆನಪಷ್ಟೇ, ಕಂಪ್ಲಿ ಆರ್ಯವೈಶ್ಯ ಸಮಾಜದ ಮುಖಂಡರು, ಪುರಸಭೆ ಅಧ್ಯಕ್ಷರಾಗಿದ್ದ ಮೋಹನ್ ಬಾಬು ಬಹುಮುಖ ವ್ಯಕ್ತಿತ್ವವುಳ್ಳವರು.
ದಿನಾಂಕ 9.4 1985 ರಿಂದ 3. 12. 1988ರ ತನಕ ಕಂಪ್ಲಿ ಪುರಸಭೆ ಅಧ್ಯಕ್ಷರಾಗಿದ್ದರು.
ಪುರಸಭೆಗೆ ನಿರಂತರ ಆದಾಯ ಕಲ್ಪಿಸಲು ಮಳಿಗೆಗಳನ್ನು ಕಟ್ಟಿಸಿ ಬಾಡಿಗೆಯನ್ನು ನೀಡಿದ್ದರು ಇದರಿಂದ ಪುರಸಭೆಗೆ ಆದಾಯದೊಂದಿಗೆ ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಅನುಕೂಲವಾಗಿತ್ತು.

ಆಗ ಇದ್ದ ಹೊಸಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳದಿಂದ ಟಿಕೆಟ್ ದೊರೆತಿತ್ತು. ಆದರೆ ತುರ್ತಾಗಿ ಆಗಿನ ನಾಯಕರಾದ ರಾಮಕೃಷ್ಣ ಹೆಗ್ಡೆ ಅವರು ಟಿಕೆಟ್ ಬದಲಾವಣೆ ಮಾಡಿದ್ದರು ಇಲ್ಲದಿದ್ದರೆ ಹೊಸಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗುತ್ತಿದ್ದರು, ಕಂಪ್ಲಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಕಂಪ್ಲಿಯ ಮೊದಲ ಆಂಗ್ಲ ಮಾಧ್ಯಮ ಶಾಲೆಯಾದ ಭಾರತೀಯ ಶಿಶುವಿದ್ಯಾಲಯ ( BSV) ಅಭಿವೃದ್ಧಿಗೂ ಶ್ರಮಿಸಿದವರು.
ಕಂಪ್ಲಿಯ ಪ್ರತಿಷ್ಠಿತ ಕಾಸ್ಮ ಪಾಲಿಟಿನ್ ಕ್ಲಬ್ ನ ಕ್ರಿಯಾಶೀಲ ಸದಸ್ಯರಾಗಿದ್ದರು. ಮನರಂಜನೆ ಜೊತೆಗೆ ಹಿರಿಯ ಕಿರಿಯರೊಂದಿಗೆ ಸ್ನೇಹಿತರೊಂದಿಗೆ ಒಗ್ಗೂಡಿ ಸಮಯ ಕಳೆಯುವ ಉತ್ತಮ ಮಾತುಗಾರರಾಗಿದ್ದರು. ಹಾಸ್ಯ ಪ್ರಜ್ಞೆಯೊಂದಿಗೆ ಸಮಯೋಚಿತವಾಗಿ ಮಾತನಾಡುವ ಭಾಷಿಕರಾಗಿದ್ದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಹಾಗೂ ಇವರ ಸ್ನೇಹಿತರು ಸಂತಾಪವನ್ನು ಸೂಚಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ