ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಸೂರಿನ ಅನಧಿಕೃತ ಪಿಜಿ ಗಳ ವಿರುದ್ಧ ಕ್ರಮ ಕೈಗೊಳ್ಳಲು ತೇಜಸ್ವಿ ಆಗ್ರಹ

ಮೈಸೂರಿನಲ್ಲಿರುವ ಅನಧಿಕೃತ ಪಿಜಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪಿಜಿ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ ವಿಶೇಷವಾಗಿ ಹೊರ ರಾಜ್ಯಗಳಿಂದ ಬರುವವರು ಹೆಚ್ಚಾಗಿ ಪಿಜಿಗಳನ್ನು ಬಳಸುತ್ತಿದ್ದಾರೆ.

ಕೆಲವರು ಹಣದ ಆಸೆಗಾಗಿ ನಿಯಮಗಳನ್ನು ಮೀರಿ ಮನೆಗಳನ್ನೆ ಬಾಡಿಗೆಗೆ ಪಡೆದು ಪಿಜಿ ಗಳಾಗಿ ಬದಲಾಯಿಸುತ್ತಾರೆ ಎಂದು ತೇಜಸ್ವಿ ಆರೋಪಿಸಿದ್ದಾರೆ.

ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಪಿಜಿ ಗಳಿಗೆ ನುಗ್ಗಿ ಹತ್ಯೆ ಮತ್ತು ಹಲ್ಲೆಯಾಗಿರುವ ಪ್ರಕರಣಗಳಿವೆ.

ನಿಯಮಾನುಸಾರ ಪಿಜಿ ನಡೆಸಬೇಕಾದರೆ ಇರಬೇಕಾದ ರೂಲ್ಸ್ ಗಳೆಂದರೆ ಕಡ್ಡಾಯವಾಗಿ ನಗರ ಪಾಲಿಕೆಯಿಂದ ಪರವಾನಿಗೆ ಪಡೆದಿರಬೇಕು ಮತ್ತು ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿರಬೇಕು, ಸಿಸಿಟಿವಿ ಅಳವಡಿಕೆ ಕಡ್ಡಾಯ, 90ದಿನಗಳ ಡೇಟಾ ಸಿಗುವ ವ್ಯವಸ್ಥೆ ಇರಬೇಕು, ಕನಿಷ್ಠ ಪಕ್ಷ ಒಬ್ಬ ಸಿಬ್ಬಂದಿಯನ್ನು 24/7 ಸೇವೆಯಲ್ಲಿ ಇಡಬೇಕು, ಅಕ್ಕ ಪಕ್ಕದ ಜನರಿಗೆ ಕಿರಿಕಿರಿಯಾಗದಂತೆ ಗಮನಹರಿಸಬೇಕು.

ಕೆಲವು ಲೇಡಿಸ್ ಪಿಜಿ ಗಳಲ್ಲಿ ಹುಡುಗಿಯರ ನೋಡಲು ಹುಗುಗರ ಗುಂಪೆ ಪಿಜಿ ಗಳ ಆಸುಪಾಸಿನಲ್ಲಿ ನಿಂತಿರುತ್ತಾರೆ ಮತ್ತು ಹುಡುಗ ಹುಡುಗಿಯರು ಅಲ್ಲೇ ಮಾತನಾಡುತ್ತಾ ನಿಂತಿರುತ್ತಾರೆ ಇದರಿಂದ ಸ್ಥಳೀಯರಿಗೆ ಮುಜುಗರವಾಗುತ್ತದೆ.
ಉದಾಹರಣೆಗೆ ರಾಮಾನುಜ ರಸ್ತೆ, 19 ನೇ ತಿರುವಿನಲ್ಲಿರುವ ಪಿಜಿ ಯಲ್ಲಿ ಅನೇಕ ಹುಡುಗಿಯರು ಕೇರಳ, ತಮಿಳುನಾಡು ಕಡೆಯಿಂದ ಬಂದು ವಾಸವಿದ್ದಾರೆ‌.
ಇವರನ್ನು ನೋಡಲು, ಕರೆದು ಕೊಂಡು ಹೋಗಲು ದಿನನಿತ್ಯವೂ ಸಂಜೆ ಹುಡುಗರು ಬರುತ್ತಾರೆ ಲಲ್ಲೇ ಹೊಡೆಯುತ್ತಾ ನಿಂತಿರುತ್ತಾರೆ ಎಂದು ತೇಜಸ್ವಿ ದೂರಿದ್ದಾರೆ.
ಇದರಿಂದ ಆಸುಪಾಸಿನ ನಿವಾಸಿಗಳಿಗೆ ಮುಜುಗರ ಉಂಟಾಗುವುದಲ್ಲದೆ ಕಿರಿಕಿರಿಯಾಗುತ್ತಿದೆ.
ಇಂತಹ ಅನೇಕ ಪಿಜಿ ಗಳು ಇರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅನಧಿಕೃತ ಮತ್ತು ನಿಯಮ ಉಲ್ಲಂಘಿಸಿರುವ ಪಿಜಿ ಗಳಿಗೆ ಬೀಗ ಜಡಿದು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ