ಮಂಡ್ಯ: ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆ ಪ್ರಗತಿ ಕಾಣಲು ಶಿಕ್ಷಕ-ಉಪನ್ಯಾಸಕರ ಬೋಧನಾ ಶೈಲಿ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಕೌಶಲ್ಯತೆಯಿಂದ ಕೂಡಿರಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.
ನಗರದಲ್ಲಿರುವ ಕಾಳೇಗೌಡ ಶಾಲಾ ಆವರಣದಲ್ಲಿರುವ ಸಂತೋಷ್ ಪದವಿಪೂರ್ವ ಕಾಲೇಜು ಬಳಿ ಬದಕು ಬೆಳಕು ಸೇವಾ ಸಮಿತಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ, ನಿವೃತ್ತ ಶಿಕ್ಷಕ ಕೆ.ಮಾಯಿಗಶೆಟ್ಟಿ ಸೇವಾ ಸಮಿತಿ, ಸಂತೋಷ್ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿಜ್ಞಾನ-ವಾಣಿಜ್ಯ ವಿಭಾಗದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂಧನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿ
ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಲ್ಲಿ ಯಶಸ್ಸಿಯಾಗಿದ್ದಾರೆ, ಸಂತೋಷ್ ಪಿಯು ಕಾಲೇಜಿನಂತ ಶೇ.೧೦೦ರಷ್ಟು ಫಲಿತಾಂಶ ದಾಖಲಿಸುವ ಕಾಲೇಜುಗಳು ಇವೆ, ವಿದ್ಯಾರ್ಥಿಗಳಿಗೆ ಬೇಕಿರುವುದು ಗುಣಮಟ್ಟದ ಕೌಶಲ್ಯಜ್ಞಾನ ಹೆಚ್ಚಿಸುವ ಶಿಕ್ಷಣವೇ ಹೊರತು, ಬೋಧನಶಿಕ್ಷಣವಲ್ಲ ಎಂದು ನುಡಿದರು.
ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆ ಬಂತು, ನಾವು ಅಂದುಕೊಂಡಷ್ಟು ಬರಲ್ಲಿಲ್ಲ ಎಂದು ವಿದ್ಯಾರ್ಥಿಗಳು ಧೃತಿಗೆಡುವುದು ಬೇಡ, ಪೋಷಕರು ಆತಂಕ ಪಡುವುದು ಬೇಡ, ಯಾವುದೇ ಅನಾಹುತಕ್ಕೆ ಬಲಿಯಾಗುವುದು ಬೇಡ, ಪರೀಕ್ಷೆಗಳನ್ನು ಮತ್ತೊಮ್ಮೆ ಬರೆಯೋಣ, ಸಾಕಷ್ಟು ದಾರಿಗಳಿವೆ ಎಂದು ಕಿವಿಮಾತು ಹೇಳಿದರು.
ಶಿಕ್ಷಣದಿಂದ ಜ್ಞಾನ, ಕೌಶಲತೆಯಿಂದ ಉದ್ಯೋಗ-ಆತ್ಮವಿಶ್ವಾಸದಿಂದ ಉದ್ಯಮ, ಹೀಗೆ ಸಾಕಷ್ಟು ದಾರಿಗಳಿವೆ, ಬದುಕುವ ಹಠ ಬೇಕು, ಸಾಧನೆ ಮಾಡುವ ಗುರಿ ಇರಿಸಿಕೊಳ್ಳಬೇಕು, ನಾನು ಇಂಜನಿಯರ್ ಪದವಿ ಪಡೆಯಲಾಗಲಿಲ್ಲ, ಶ್ರಮಪಟ್ಟು ಪೋಟೋಗ್ರಫಿ, ಬೇಕರಿ ಉದ್ಯಮ ಮಾಡಿದೆ, ಈಗ ೧೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದೇನೆ ಎಂದು ಅನುಭವ ಹೇಳಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಇನ್ಪೇರ್ ವಿನಯ್ಕುಮಾರ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಎಂ.ಲೋಕೇಶ್, ಪ್ರಾಂಶುಪಾಲ ಸಂತೋಷ್, ಶಾಲೆಯ ಆಡಳಿತಾಧಿಕಾರಿ ಚಂದ್ರಪ್ರಭ, ಮುಖ್ಯಶಿಕ್ಷಕ ಗೋವಿಂದರಾಜ್, ಶಿಕ್ಷಕ ಜಯಲಕ್ಷ್ಮಿಮ್ಮ ಮತ್ತಿತರರಿದ್ದರು.
- ಕರುನಾಡ ಕಂದ
