
ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ.) ಗ್ರಾಮದಲ್ಲಿ ಶ್ರೀ ಸಂತ ತುಳಸಿದಾಸ ಮಹಾರಾಜರ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಸಪ್ತಾಹ ಕಾರ್ಯಕ್ರಮ ಜರುಗಲಿದೆ.
ಶ್ರೀ ಕ್ಷೇತ್ರ ಕೌಠಾ ಬಿ. ಗ್ರಾಮದಲ್ಲಿ ದಿ. 15 /5/25 ರಂದು ಸಪ್ತಾಹ ಕಾರ್ಯಕ್ರಮ ಪ್ರಾರಂಭವಾಗಿ 21 .05.2025 ರವರೆಗೆ ಏಳು ದಿವಸಗಳ ಕಾಲ ನಡೆಯಲಿದ್ದು ಶ್ರೀ ಷ. ಬ್ರ.108 ಶಿವಲಿಂಗ ಶಿವಾಚಾರ್ಯ ಹಾಗೂ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠ ಹೆಡಗಾಪೂರ್ ಅವರ ದಿವ್ಯ ಸನ್ನಿಧಾನದಲ್ಲಿ ದಿ. 21-5-2025 ರಂದು ಸಮಯ ಮುಂಜಾನೆ 9:00 ಗಂಟೆಗೆ ತುಳಸಿದಾಸ ಮಹಾರಾಜರ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಶ್ರೀ ಸಂತ ತುಳಸಿದಾಸ ಮಹಾರಾಜರ ದೇವಸ್ಥಾನ ಟ್ರಸ್ಟ್ ಹಾಗೂ ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಿಯ ಪೂರ್ವಕವಾಗಿ ಈ ಏಳು ದಿವಸ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಲ್ಲರೂ ತನು ಮನ ಧನದಿಂದ ಭಾಗವಹಿಸಿ ಶ್ರೀ ಸಂತ ತುಳಸಿದಾಸ ಮಹಾರಾಜರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ :ಸಂಗಮೇಶ್ ಚಿದ್ರೆ
