ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಗ್ರಾಮ ಪಂಚಾಯಿತಿ ವತಿಯಿಂದ ಹೆಸ್ಕಾಂ ಪವರ್ ಮೆನ್ ಗೆ ಬೀಳ್ಕೊಡುವ ಸಮಾರಂಭ “

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಹೆಸ್ಕಾಂ ಪವರ್ ಮೆನ್ ಶ್ರೀ ರಿಯಾಜ್ ಕೆರೂಟಿಗಿ ಯವರಿಗೆ ಇಂದು ಅಗರಖೇಡ ಗ್ರಾಮ ಪಂಚಾಯತಿ ವತಿಯಿಂದ ಹಾಗೂ ಗ್ರಾಮಸ್ಥರಿಂದ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾ. ಪಂ. ಮಾಜಿ ಉಪಾಧ್ಯಕ್ಷರು ಭೀಮಾಶಂಕರ ಆಳೂರ ಇವರು ಮಾತನಾಡಿ ಇಂಥ ಕೆಲಸಗಾರರು ನಮ್ಮೂರಿಗೆ ಅವಶ್ಯವಿದ್ದು ಯಾವುದೇ ಜಾತಿ ಬೇಧ ಭಾವ ಮಾಡದೆ, ರಾತ್ರಿ ಹಗಲು ಎನ್ನದೆ ಫೋನ್ ಮಾಡಿದಾಗ ಕೆಲಸ ನಿರ್ವಹಿಸುವ ಇಂತ ವ್ಯಕ್ತಿಗೆ ಬೀಳ್ಕೊಡುವುದಕ್ಕೆ ತುಂಬಾ ಬೇಜಾರಾಗುತ್ತಿದೆ ಆದರೂ ಅವರು ವರ್ಗಾವಣೆಯಾಗಿರುವುದರಿಂದ ಅವರಿಗೆ ಬೀಳ್ಕೊಡುತ್ತಾ ಇದೀವಿ, ಮುಂದೆ ಅವಕಾಶ ಸಿಕ್ಕರೆ ನಮ್ಮೂರಿಗೆ ಮತ್ತೆ ಬನ್ನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ್ ಖಂಡೇಕಾರ್, ವಿಶ್ವನಾಥ್ ಕೌಲಗಿ, ಸುರೇಶ್ ಬಿರಾದಾರ್, ಕಾಶಿನಾಥ್ ಮಾನೆ, ಶ್ಯಾಮ್ ಮೋರೆ, ಸುರೇಶ್ ದಿಕ್ಸಂಗಿ, ಜಾಕಿರ್ ವಾಲೀಕಾರ, ಶ್ರೀಶೈಲ ಸಾವಳೆ, ಚಂದು ಬಡಿಗೇರ, ಧರು ತೇಲಿ, ಮಹಂತೇಶ್ ಬಂಡಗಾರ್, ಸಂತುಗೌಡ ಪಾಟೀಲ್, ಭೀಮರಾಯ ಯಲಮೇಲಿ, ಮುದಕು ಜಗನ್ನಾಥ್, ಜಗೂ ಕೋಟಿ, ಪಿಂಟು ಡಂಗಿ ಮುಂತಾದವರು ಪಾಲ್ಗೊಂಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ