ಬಳ್ಳಾರಿ / ಕಂಪ್ಲಿ : ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಮಳೆಗೆ ಎಮ್ಮಿಗನೂರು ಗ್ರಾಮದಲ್ಲಿ 6 ಕಚ್ಚಾ ಮನೆಗಳು, ಗ್ರಾಮದ 4ನೇವಾರ್ಡ್ ತಳವಾರ್ಪೇಟೆಯ ಮಲ್ಲಿಕಾರ್ಜುನ ಗುಡಿ ಬಳಿ ಹುಲಿಗೆಮ್ಮ, ಕೆಂಚಮ್ಮ ಹಾಗೂ ಜೆ ಅಮೃತ ಎನ್ನುವವರ ಮೂರು ಮನೆಗಳ ಮುಂಭಾಗದ ಮೇಲ್ಚಾವಣಿ ಕುಸಿದು ಬಿದ್ದಿದೆ ಎಂದು ತಹಶೀಲ್ದಾರ್ ಮಂಜುನಾಥ ನಾಯಕ್ ತಿಳಿಸಿದ್ದಾರೆ. ಕಣಿವೆ ತಿಮ್ಲಾಪುರ ಗ್ರಾಮದಲ್ಲಿ ಒಂದು ಮನೆ ಭಾಗಶಃ ಮಳೆಗೆ ಬಿದ್ದಿದೆ.
ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
