ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಂತ್ರಾಕ್ಷತೆ ಇಲ್ಲದೆ ಸಂವಿಧಾನ ಸಾಕ್ಷಿಯಾಗಿ ಸರಳ ವಿವಾಹವಾದ ಜೋಡಿ

ವಿಜಯನಗರ / ಹೊಸಪೇಟೆ : ಮದುವೆ ಎಂದರೆ ಹಲವರ ಜೀವನದಲ್ಲಿ ಒಂದು ವಿಶೇಷತೆ, ಮದುವೆಗಳು ವಿಚಿತ್ರ ವಿಶೇಷ ಎನಿಸುವಂತೆ ನಡೆದಿದೆ ವಿಮಾನದಲ್ಲಿ, ನಗರದ ವೃತ್ತಗಳಲ್ಲಿ ನಿಂತು, ಐಷಾರಾಮಿ ಹೋಟೆಲ್ಗಳಲ್ಲಿ, ದೂರದ ದೇವಸ್ಥಾನಗಳಲ್ಲಿ , ಅಷ್ಟೇ ಏಕೆ ಸ್ಮಶಾನಗಳಲ್ಲಿಯೂ ಮದುವೆಯಾದವರು ಇದ್ದಾರೆ.

ಕೆಲವರಿಗೆ ಕೋರ್ಟ್, ವಿಧಾನಸೌಧ, ತಾಜ್ ಮಹಲ್, ಅರಮನೆಗಳಲ್ಲಿ ಮದುವೆ ಆಗುವ ಕನಸು ಇರುತ್ತದೆ.

ಮಾದರಿ ಎನಿಸುವ ಕುವೆಂಪು ತೋರಿಸಿದ ಸರಳ ಮಂತ್ರ ಮಾಂಗಲ್ಯದ ರೀತಿಯಲ್ಲಿ ಮದುವೆಗಳು ನಡೆದಿದೆ ಆದರೆ ಇಲ್ಲೊಂದು ಜೋಡಿ ವಿಶೇಷವಾಗಿ ಮಾದರಿ ಎನಿಸುವಂತೆ ಸಂವಿಧಾನದ ಸಾಕ್ಷಿಯಾಗಿ ಸರಳವಾಗಿ ವಿವಾಹ ನೆರವೇರಿಸಿಕೊಂಡಿರುವುದು ಬುದ್ಧ, ಬಸವ, ಅಂಬೇಡ್ಕರ್, ಆಸೆಗಳ ಪಾಲನೆಗೆ ಕಂಕಣ ಬದ್ಧರಾಗಿರುವುದು ಇಂದಿನ ಯುವ ಜನಾಂಗಕ್ಕೆ ಸಮಾಜಕ್ಕೆ ಮಾದರಿ ನಡೆಯಾಗಿದೆ ಇಂಥದೊಂದು ಮಾದರಿ ಮದುವೆ ಹೊಸಪೇಟೆಯಲ್ಲಿ ನಡೆದಿದೆ.

ಹೊಸಪೇಟೆಯ ಜೆ. ಶಿವಕುಮಾರ್ ಹಾಗೂ ಜಿ. ಸ್ವಾತಿ ಎಂಬುವರು ವಿನೂತನ ರೀತಿಯಲ್ಲಿ ಸಂವಿಧಾನದ ಸಾಕ್ಷಿ ಸಾಂಗತ್ಯದ ವಿವಾಹವಾದ ನವ ಜೋಡಿಗಳು.

ಒಟ್ಟಿನಲ್ಲಿ ಆಡಂಬರದ ಜೀವನಕ್ಕೆ ಮಾರು ಹೋಗುತ್ತಿರುವ ಇಂದಿನ ಯುವ ಜನಾಂಗದ ನಡುವಿನಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬುದ್ಧ , ಬಸವ, ಅಂಬೇಡ್ಕರ್ ಹಾಗೂ ಶರಣ ಸಂಸ್ಕೃತಿಯ ಆಶಯಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಯುವ ಜೋಡಿಯೊಂದು ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವುದು ಸಮಾಜದ ಹಿತದೃಷ್ಟಿಯಿಂದ ಒಂದು ಉತ್ತಮ ಹೆಜ್ಜೆ ಇದೇ ರೀತಿಯ ಹತ್ತು , ಹಲವು, ಸಾವಿರಾರು ವಿವಾಹಗಳು ನೆರವೇರಲಿ. ಸಾಮಾಜಿಕ ಸಮಾನತೆ ಕೌಟಂಬಿಕ ಭದ್ರತೆಗೆ ಮಾದರಿಯಾಗಲಿ ಹಾಗೂ . ಶಿವಕುಮಾರ್ ಜಿ. ಸ್ವಾತಿ ಜೋಡಿ ನೂರಾರು ಕಾಲ ಸಮಾನತೆ ಸಹ ಬಾಳ್ವೆಯ ಜೀವನದೊಂದಿಗೆ ಸಮಾಜಕ್ಕೆ ಮಾದರಿಯಾಗಲಿ ಎನ್ನುವುದು ಎಲ್ಲರ ಆಶಯ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ