ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ವರದಿಗೆ ಎಚ್ಚೆತ್ತುಕೊಂಡ ಕ. ರ. ವೇ.

ಬಳ್ಳಾರಿ / ಕಂಪ್ಲಿ : ಕರ್ನಾಟಕ ರಕ್ಷಣಾ ವೇದಿಕೆ ಟಿ. ಎನ್. ನಾರಾಯಣಗೌಡ ಬಣದ ಪದಾಧಿಕಾರಿಗಳು ನಿನ್ನೆ ನಮ್ಮ ಕರುನಾಡ ಕಂದ ಪತ್ರಿಕೆಯ ನ್ಯೂಸ್ ಪೋರ್ಟಲ್ ನಲ್ಲಿ “ನಾಮಫಲಕ, ಜಾಹೀರಾತು ಬ್ಯಾನರ್ ಗಳಲ್ಲಿ ಕನ್ನಡವೇ ಮಾಯ” ಎಂಬ ಶೀರ್ಷಿಕಡಿಯಲ್ಲಿ ಮಾಡಿದ ವರದಿಗೆ ಇಂದು ಎಚ್ಚೆತ್ತುಕೊಂಡು ಕಂಪ್ಲಿ ಕ್ಷೇತ್ರಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ತಾಲೂಕು ಅಧ್ಯಕ್ಷ ಸಿ.ಡಿ. ರಾಜಶೇಖರ ಹಾಗೂ ಪದಾಧಿಕಾರಿಗಳು ಇಂದು ಪುರಸಭೆಯ ವ್ಯವಸ್ಥಾಪಕ ಚಿತ್ರಗಾರ ಪ್ರಶಾಂತರವರಿಗೆ ಮನವಿ ಪತ್ರವನ್ನು ನೀಡಿದ ನಂತರ ಮಾತನಾಡಿ ಕಂಪ್ಲಿಯಲ್ಲಿ ಆಂಗ್ಲ ಭಾಷೆ ನಾಮಫಲಕಗಳನ್ನು ರಾಜಾರೋಷವಾಗಿ ಹಾಕಲಾಗಿದೆ. ಆಂಗ್ಲ ಭಾಷೆಯ ನಾಮಫಲಕಗಳ ಹಾವಳಿ ಹೆಚ್ಚಾಗಿದೆ. ಅಂಗಡಿ, ಹೋಟೆಲ್ ಗಳ ನಾಮಫಲಕಗಳು ಆಂಗ್ಲಮಯವಾಗಿವೆ, ಕನ್ನಡ ಪ್ರಧಾನ ಭಾಷೆಯಾಗಿ ಕರ್ನಾಟಕ ಸರ್ಕಾರದ ಆದೇಶ ನಿಗದಿ ಪಡಿಸಿದ ಶೇಕಡಾ 60ರಷ್ಟು ಕನ್ನಡವನ್ನು ಬಳಸಿ ನಾಮ ಫಲಕಗಳನ್ನು ಹಾಕಬೇಕು ಮತ್ತು ಬ್ಯಾನರ್ ತಯಾರಿಸುವವರಿಗೆ ಸಹ ಪುರಸಭೆ ಆಡಳಿತ ಸೂಚಿಸಬೇಕೆಂದು ಮುಖ್ಯ ಅಧಿಕಾರಿಗಳಿಗೆ ವಿನಂತಿಸಿದರು. ಒಂದು ವೇಳೆ ಇದನ್ನು ಪಾಲಿಸದಿದ್ದರೆ ನಾಮಫಲಕಗಳಿಗೆ ಕಪ್ಪುಮಸಿಯನ್ನು ಬಳೆಯುತ್ತೇವೆಂದು ಆಗ್ರಹಿಸಿದರು. ಒಂದು ವಾರದೊಳಗೆ ಅಂದರೆ 31ನೇ ಮೇ 2025 ಕನ್ನಡದಲ್ಲಿ ಅಳವಡಿಸಬೇಕು ಇಲ್ಲವಾದಲ್ಲಿ ಕಪ್ಪು ಮಸಿಯನ್ನು ಬಳೆಯುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಂಗ್ ನಾಗರಾಜ, ರಾಘವೇಂದ್ರ, ಕಂಬಳಿ ರಾಮಕೃಷ್ಣ, ಎನ್ ಶಾಷವಲಿ, ಜೆ. ಕಾರ್ತಿಕ್, ಪರಶುರಾಮ, H. ಲಿಂಗೇಶ, ರಾಘು, ಸುಧಾಕರ, ವೀರನಗೌಡ, ಆಯೋದಿ ರಮೇಶ, ವಿ. ಟಿ. ನಾಗರಾಜ, ಹೂಗಾರ್ ಗಣೇಶ, ಇಟ್ಗಿ ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ