ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಅಲಬೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಹೆಚ್.ಎಂ. ವಪ್ಪತ್ತೆಮ್ಮ ಸಿದ್ದೇಶ್ವರ ಉಪಾಧ್ಯಕ್ಷರಾಗಿ ಸಿ.ಅಂಜಿನಪ್ಪ ಅವರನ್ನು ಆಯ್ಕೆ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಇವರುಗಳು ಗ್ರಾಮ ಅಭಿವೃದ್ಧಿಗೆ ಕೈ ಜೋಡಿಸಿ ಉತ್ತಮ ಗುಣಮಟ್ಟದ ಕೆಲಸಗಳನ್ನು ಮಾಡುವುದರ ಮೂಲಕ ತಮ್ಮ ಯಶಸ್ವಿ ಸಮಾಜ ಸೇವೆಯನ್ನು ಮಾಡುವುದರ ಮೂಲಕ ತಮ್ಮ ಅಧಿಕಾರವನ್ನು ನಿರ್ವಹಿಸುತ್ತಾರೆಂದು, ಊರಿನ ಗಣ್ಯರು, ಊರಿನ ಎಲ್ಲಾ ಜನಸ್ತೋಮ ಇವರನ್ನು ಈ ಗದ್ದುಗೆಗೆ ಏರಿಸಿದ್ದಾರೆ, ಈ ಒಂದು ಚುನಾವಣೆಯನ್ನು ತಾಲೂಕು ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳು ಆದಂತಹ ಅಂಬರಿಷ್ ಹಾಗೂ ಇಟ್ಟಿಗಿ ಆರಕ್ಷಕ ಸಿಬ್ಬಂದಿ ಪಿ.ಎಸ್.ಐ ಅಬ್ಬಾಸ್ ಸರ್ ,ಆರಕ್ಷಕರು ಟಿ. ಪ್ರಕಾಶ್ ಮತ್ತು ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳಾದ ಎ.ಶಿವಾನಂದಪ್ಪ , ಜಿ ಶಿಲ್ಪಾ ವೀರನಗೌಡ, ಎ. ಬಿ.ಜಂಬಣ್ಣ, ತಳವಾರ ರೇಖಾ ಶಿವನಾಗ, ಉಜ್ಜಿನಿ ನಾಗರಾಜ ಬೆನ್ನೂರು ನಿರ್ಮಲವ್ವ ಮಲ್ಲೇಶಪ್ಪ, ಸಿ.ಚಂದ್ರಮ್ಮ ವಾಮದೇವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತ ಕುಮಾರ ಮತ್ತು ಕಾರ್ಯದರ್ಶಿ ಮಾರುತಿ ಪೂಜಾರ್, ಬಿಲ್ ಕಲೆಕ್ಟರ್ ಎ.ಕೊಟ್ರೇಶ್ ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ,ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಎಸ್ ಎಸ್ ಎಂ ಶಿವರುದ್ರಯ್ಯ, ಬಾತಿ ಕೊಟ್ರೇಶ್, ಅಂಕ್ಲಿ ರಾಮಣ್ಣ, ವಿ. ಎಸ್. ಎಸ್. ಎನ್.ಸಿಬ್ಬಂದಿ ಎನ್ ಹಾಲೇಶ್, ಸಿವಿಲ್ ಗುತ್ತಿಗೆದಾರರಾದ ಎನ್ ಹೇಮಣ್ಣ, ಜಿ. ಗಣೇಶ್ ವಿಜಯನಗರ ಜಿಲ್ಲಾ ನವಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಕೊಟ್ಟೂರು ತಾಲೂಕು ಅದ್ಯಕ್ಷರು ಯು. ಕರಿಬಸಪ್ಪ,ಕೆ.ಪ್ರಕಾಶ್,
ಎನ್ ವೀರೇಶ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಸ್.ಡಿ. ಎಂ.ಸಿ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪ್ರೌಢಶಾಲೆಯ ಮುಖ್ಯಗುರುಗಳಾದ ಮಂಗಳಮ್ಮ ,ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಮಹಾಬಲೇಶ್ವರ ಹಾಗೂ ಊರಿನ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿಗಾರರು- ಎನ್ ಚಂದ್ರಗೌಡ
