ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚನ್ನಾಲಿಂಗನಹಳ್ಳಿ ಮತ್ತು ಕಣ್ಣೂರು ಗ್ರಾಮಗಳಲ್ಲಿ 2 ಕೋಟಿ ವೆಚ್ಚದ ಸಿ. ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು 2024 – 25 ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಸುಮಾರು 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 1.50 ಕೋಟಿ ಚೆನ್ನಾಲಿಂಗನಹಳ್ಳಿ ಹಾಗೂ 50 ಲಕ್ಷ ಕಣ್ಣೂರು ಗ್ರಾಮಗಳಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಗ್ರಾಮಗಳ ಅಬಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದು ಎಂದರು.
ನಂತರ ಮಾತನಾಡಿದ ಅವರು
ಗುತ್ತಿಗೆದಾರರಿಗೆ ನನ್ನದೊಂದು ಕಿವಿಮಾತು ನೀವು ಕೈಗೊಳ್ಳುವ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದ ವಿಚಾರದಲ್ಲಿ ನನ್ನ ಜೊತೆ ಯಾವುದೇ ರಾಜಿ ಇಲ್ಲ. ಸ್ಥಳೀಯ ಮುಖಂಡರ ವಿಶ್ವಾಸದೊಂದಿಗೆ ಪ್ರತಿ ಹಂತದ ಕಾಮಗಾರಿಯ ಪ್ರಗತಿಯನ್ನು ನನ್ನ ಗಮನಕ್ಕೆ ತರಬೇಕು. ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವ ಜೊತೆಗೆ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ನಂತರ ಚನ್ನಾಲಿಂಗನಹಳ್ಳಿ ಗ್ರಾಮದ ಶಿಕ್ಷಕರಾದ ಕೆ. ನಾಗರಾಜು ಮಾತನಾಡಿ ನಮ್ಮ ಗ್ರಾಮದಲ್ಲಿ ಇನ್ನು ಅನೇಕ ಕೆಲಸ ಕಾರ್ಯಗಳು ಆಗಬೇಕಾಗಿದೆ. ಸಿದ್ದಪ್ಪಾಜಿ ದೇವಸ್ಥಾನದ ಮುಂಭಾಗ ಮುಖ್ಯದ್ವಾರ ನಿರ್ಮಾಣ, ಬಾಬಾ ಸಾಹೇಬ್ ಅಂಬೇಡ್ಕರ್ ಅಥವಾ ಜಗಜೀವನ ರಾಮ್ ಹೆಸರಿನಲ್ಲಿ ಗ್ರಂಥಾಲಯ, ಹಳೇಬೀದಿ ಮತ್ತು ಹೊಸಬೀದಿ ನಡುವೆ ಸಂಪರ್ಕ ಸಾಧಿಸುವ ಕಿರು ಸೇತುವೆ ನಿರ್ಮಾಣ, ಸಾಂಸ್ಕೃತಿಕ ಭವನ ನಿರ್ಮಾಣ, ಸಮುದಾಯದ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣ, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಹೈ ಮಾಸ್ಕ್ ದೀಪ ಅಳವಡಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಮಾನ್ಯ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಕಣ್ಣೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ರತ್ನಮ್ಮ, ಜ್ಯೋತಿ, ಸೋಮೇಶ, ರಮೇಶ, ಸೋಮಣ್ಣ, ಮುಖಂಡರಾದ ರಾಚಪ್ಪ, ನಾಗೇಂದ್ರ, ನಟರಾಜು, ಶ್ರೀಕಂಠ, ಮಲ್ಲೇಗೌಡ, ಸುರೇಶ್, ವೆಂಕಟೇಶ್,ರಾಚಪ್ಪ, ಯಜಮಾನರಾದ ಮಾದೇವ, ನಿಂಗರಾಜು, ಅರಸಯ್ಯ, ಕರಿಯನಪುರ ಕುಮಾರ, ರಾಜು, ಮಾದೇಶ್, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್
