ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ ರಚನೆಗೆ ಅಧ್ಯಯನದ ಅವಶ್ಯಕತೆ ಇದೆ : ಡಾ. ಭಾಗ್ಯಜ್ಯೋತಿ

ಕೊಪ್ಪಳ: ಕೊಪ್ಪಳ ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ, ಶ್ರೀ ರಮೇಶ್ ಸುರ್ವೆ ದಂಪತಿಗಳ ಸುಪುತ್ರ ಕಿಶನ್ ಸುರ್ವೆ, ಮತ್ತು ತೇಜಸ್ವಿ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಅರತಕ್ಷತೆ ರಾಜ್ಯ ಮಟ್ಟದ ಕವಿಗೋಷ್ಠಿ ಜರುಗಿತು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಭಾಗ್ಯಜ್ಯೋತಿ ಅವರು ವಹಿಸಿದ್ದರು. ಅವರು ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳಿವೆ ಅವುಗಳೆಂದರೆ,
ಕಥೆ,ಕವನ,ನಾಟಕ,ಕಾದಂಬರಿ,ಜೀವನ ಚರಿತ್ರೆ, ಆತ್ಮಕಥೆ, ಅಷ್ಟೇ ಅಲ್ಲದೆ ಹಾಯ್ಕು,ಹನಿಗವನ, ಚುಟುಕು,ಶಾಯಿರಿ, ಟಂಕಾ ರುಬಾಯಿಯಂತಹ ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತಿಗಳು, ವೈವಿಧ್ಯಮಯವಾದ ಸಾಹಿತ್ಯ ರಚನೆಯಲ್ಲಿ ತೊಡಗಿ, ನಮ್ಮ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವುದು
ನಾವೆಲ್ಲಾ ಹೆಮ್ಮೆ ಪಡುವ ವಿಷಯವಾದರೂ, ಯುವ ಕವಿಗಳು ಅಧ್ಯಯನಶೀಲರಾಗಿ ಸಾಹಿತ್ಯ ರಚನೆಗೆ ತೊಡಗಿದರೆ, ಅದು ಸತ್ವಪೂರ್ಣ
ಸಾಹಿತ್ಯವಾಗುತ್ತದೆ, ಅದರ ಅವಶ್ಯಕತೆ ತುಂಬಾನೆ ಇದೆ, ಎಂದು ಕವಿಗಳ ಕವನಗಳನ್ನು ವಿಮರ್ಶಿಸಿ, ಮಾತನಾಡಿದರು.
ಕವಿಗೋಷ್ಠಿಯನ್ನು ವಿಜಯಪುರದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಸಾಹಿತಿಗಳೂ ಆದ ಶ್ರೀ ಶ್ರೀಮಂತ ಗೊಣಗಿ ಅವರು ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳು, ಯುವ ಕವಿಗಳಿಗೆ, ಪ್ರೇರಣೆ ಯಾಗುತ್ತವೆ ಎಂದರು.
ವೇದಿಕೆಯಲ್ಲಿ ಮತ್ತೋರ್ವ ಅತಿಥಿಗಳಾಗಿದ್ದ ಮಕ್ಕಳ ಸಾಹಿತಿ, ನಾಟಕಕಾರರು ಅದ ಡಾ .ರಾಜೇಂದ್ರ ಗಡಾದ್ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ , ಸುರ್ವೆ ಯವರ ಇಂತಹ ಕಾರ್ಯಕ್ರಮಗಳು, ಸಾಹಿತ್ಯ ಪ್ರೇಮಿಗಳಿಗೆ ಅಷ್ಟೇ ಅಲ್ಲ, ಎಲ್ಲಾ ಸಾರ್ವಜನಿಕರಿಗೂ ಉತ್ತಮ ವೇದಿಕೆಯಾಗಿದೆ, ಅರತಕ್ಷತೆ ಎಂದರೇನು, ಅದರ ಮಹತ್ವ, ಅವಶ್ಯಕತೆ, ಈಗಿನ ದಿನಮಾನಗಳಲ್ಲಿ, ಇದು ಎಷ್ಟು ಪ್ರಸ್ತುತ ಎನ್ನುವ ಬಗ್ಗೆ ಮಾತಾಡಿದರು.
ವೇದಿಕೆಯನ್ನು ಅಲಂಕರಿಸಿದ್ದ
ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಶೇಖರಗೌಡ ಮಾಲಿ ಪಾಟೀಲ್ ಅವರು ರಮೇಶ್ ಸುರ್ವೆ ಸಾಂಸ್ಕೃತಿಕ ರಾಯಭಾರಿ ಅವರ ಈ ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತಿಗಳಿಗೆ ಮಾದರಿ ಎಂದು ಚುಟುಕು ಸಾಹಿತ್ಯ ಪರಿಷತ್ ನ
ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಯವರ ಕ್ರಿಯಾಶೀಲತೆಯನ್ನು
ಶ್ಲಾಘಿಸಿದರು.
ವೇದಿಕೆಯಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಜಿ.ಎಸ್ ಗೋನಾಳ ಅವರೂ ಸುರ್ವೆ ಯವರ ಸಾಹಿತ್ಯ ಪ್ರೀತಿ, ಅವರ ಸೇವೆ, ಅನನ್ಯವಾದುದು,ಎಂದರು.
ವೇದಿಕೆಯಲ್ಲಿ ಹಿರಿಯ ಕವಿ, ನಿವೃತ್ತ ಪ್ರಾಂಶುಪಾಲ, ಡಾ.ಮಹಾಂತೇಶ ಮಲ್ಲನಗೌಡ್ರು ಉಪಸ್ಥಿತರಿದ್ದರು.
ಕವಿಗೋಷ್ಠಿ ಯಲ್ಲಿ ೩೦ಕ್ಕೂ ಹೆಚ್ಚು ಕವಿ/ಕವಿಯತ್ರಿ ಯರು ಕವನ ವಾಚಿಸಿದರು.
ಕವಿಗಳಲ್ಲಿ ಪ್ರಮುಖವಾಗಿ ಶರಣಬಸಪ್ಪ ಬಿಳಿಎಲಿ, ಸುಭಾಸ ಕೂಡ್ಲಿಗಿ, ಪ್ರದೀಪ ಕುಮಾರ ಹದ್ದಣ್ಣವರ,
ರವಿ ಹಿರೇಮನಿ, ಸೋಮಶೇಖರ ಕಂಚಿ, ಶ್ರೀಮತಿ ಅನ್ನಪೂರ್ಣ ಮನ್ನಾಪುರ, ಶ್ರೀಮತಿ ಸುಮಂಗಲಾ ಹಂಚಿನಾಳ, ಪುಷ್ಪಲತಾ ಯೋಳಭಾವಿ, ಶಿವಪ್ರಸಾದ್ ಹಾದಿಮನಿ, ಡಾ.ಪ್ರಕಾಶ ಹಳ್ಳಿಗುಡಿ,ಬಡಿಗೇರ್ ಜಿಲಾನ್ ಸಾಬ್ ಕಂಪ್ಲಿ, ನಿಂಗಪ್ಪ ಕಿನ್ನಾಳ,
ಮಂಜುಳಾ ಮುನವಳ್ಳಿ, ನಟರಾಜ್ ಸೋನಾರ್, ರವೀಂದ್ರ ಬಾಕಳೆ, ಮುಂತಾದವರು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಕವನ ವಾಚಿಸಿದ ಎಲ್ಲಾ ಕವಿಗಳಿಗೆ, ಕರ್ನಾಟಕ ಕವಿ ಭೂಷಣ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವು ಶ್ರೀಮತಿ ಅನ್ನಪೂರ್ಣ ಮನ್ನಾಪುರ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕನ್ನಡ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ, ಸ್ವಾಗತಿಸಿದರು,
ಶಿಕ್ಷಕಿ, ಸಾಹಿತ್ಯ ಪ್ರೇಮಿ, ಶ್ರೀಮತಿ ಬಾಲ ನಾಗಮ್ಮ,ಅವರು ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ